<p><strong>ರಾಯಚೂರು:</strong> ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಿರುವ ತಾಲ್ಲೂಕು ಆಡಳಿತವು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಬುಧವಾರ ನಡೆಯಬೇಕಿದ್ದ ಸಂತೆಯನ್ನು ರದ್ದುಗೊಳಿಸಿದೆ.</p>.<p>ಸಿರವಾರ ತಾಲ್ಲೂಕಿನ ಕವಿತಾಳದಲ್ಲೂ ಎಂದಿನಂತೆ ವಾರದ ಸಂತೆ ಆರಂಭಿಸಲಾಗಿತ್ತು. ಕೆಲವು ಹೊತ್ತಿನ ನಂತರ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂತೆ ರದ್ದುಗೊಳಿಸಿ ಸೂಚನೆ ನೀಡಿದರು. ಜನರು ಮುಗಿಬಿದ್ದು ತರಕಾರಿಗಳನ್ನು ಖರೀದಿಸಿದರು. ಆನಂತರ ಎಲ್ಲರೂ ಚದುರಿದರು.<br />ಪ್ರತಿವಾರ ಜನದಟ್ಟಣೆಯಿಂದ ಕೂಡಿರುತ್ತಿದ್ದ ಮಾನ್ವಿ ಮತ್ತು ಕವಿತಾಳದ ತರಕಾರಿ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.</p>.<p>ಮನೆಯಿಂದ ಹೊರಬರದಂತೆ ಸೂಚನೆ: ಕಲಬುರ್ಗಿಯಲ್ಲಿ ಮಾರ್ಚ್ 10 ರಂದು ನಡೆದಿದ್ದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕವಿತಾಳದ ವ್ಯಕ್ತಿಯೊಬ್ಬರ ಬಗ್ಗೆ ಸುಳಿವು ಗೊತ್ತಾಗುತ್ತಿದ್ದಂತೆ, ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಮನೆಗೆ ಧಾವಿಸಿದರು. ಆರೋಗ್ಯ ತಪಾಸಣೆ ಕೈಗೊಂಡು, ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬಾರದಂತೆ ತಿಳಿವಳಿಕೆ ನೀಡಿದರು.</p>.<p>ವಿದೇಶದಿಂದ ದಂಪತಿ ವಾಪಸ್: ಜಿಲ್ಲೆಯ ಕವಿತಾಳ ಸಮೀಪದ ಲಕ್ಷ್ಮೀಕ್ಯಾಂಪ್ಗೆ ವಿದೇಶದಿಂದ ವಾಪಸಾಗಿರುವ ದಂಪತಿಯ ಮನೆಗೆ ತಹಶೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ತಿಳಿವಳಿಕೆ ನೀಡಿದರು.</p>.<p>ಸೌದಿ ಅರೇಬಿಯಾದ ಅಬುದಾಬಿಯಲ್ಲಿ ಕೆಲವು ದಿನಗಳವರೆಗೆ ನೆಲೆಸಿದ್ದ ದಂಪತಿ ಈಗ ವಾಪಸಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ಕೊರೊನಾ ವೈರಸ್ ಸೋಂಕು ಹರಡದಂತೆ ಮುನ್ನಚ್ಚರಿಕೆ ಕ್ರಮಗಳನ್ನು ಬಿಗಿಗೊಳಿಸಿರುವ ತಾಲ್ಲೂಕು ಆಡಳಿತವು ಜಿಲ್ಲೆಯ ಮಾನ್ವಿ ಪಟ್ಟಣದಲ್ಲಿ ಬುಧವಾರ ನಡೆಯಬೇಕಿದ್ದ ಸಂತೆಯನ್ನು ರದ್ದುಗೊಳಿಸಿದೆ.</p>.<p>ಸಿರವಾರ ತಾಲ್ಲೂಕಿನ ಕವಿತಾಳದಲ್ಲೂ ಎಂದಿನಂತೆ ವಾರದ ಸಂತೆ ಆರಂಭಿಸಲಾಗಿತ್ತು. ಕೆಲವು ಹೊತ್ತಿನ ನಂತರ ಆರೋಗ್ಯ ಇಲಾಖೆ ಹಾಗೂ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸಂತೆ ರದ್ದುಗೊಳಿಸಿ ಸೂಚನೆ ನೀಡಿದರು. ಜನರು ಮುಗಿಬಿದ್ದು ತರಕಾರಿಗಳನ್ನು ಖರೀದಿಸಿದರು. ಆನಂತರ ಎಲ್ಲರೂ ಚದುರಿದರು.<br />ಪ್ರತಿವಾರ ಜನದಟ್ಟಣೆಯಿಂದ ಕೂಡಿರುತ್ತಿದ್ದ ಮಾನ್ವಿ ಮತ್ತು ಕವಿತಾಳದ ತರಕಾರಿ ಮಾರುಕಟ್ಟೆಗಳು ಜನರಿಲ್ಲದೆ ಬಿಕೋ ಎನ್ನುತ್ತಿವೆ.</p>.<p>ಮನೆಯಿಂದ ಹೊರಬರದಂತೆ ಸೂಚನೆ: ಕಲಬುರ್ಗಿಯಲ್ಲಿ ಮಾರ್ಚ್ 10 ರಂದು ನಡೆದಿದ್ದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕವಿತಾಳದ ವ್ಯಕ್ತಿಯೊಬ್ಬರ ಬಗ್ಗೆ ಸುಳಿವು ಗೊತ್ತಾಗುತ್ತಿದ್ದಂತೆ, ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಮನೆಗೆ ಧಾವಿಸಿದರು. ಆರೋಗ್ಯ ತಪಾಸಣೆ ಕೈಗೊಂಡು, ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬಾರದಂತೆ ತಿಳಿವಳಿಕೆ ನೀಡಿದರು.</p>.<p>ವಿದೇಶದಿಂದ ದಂಪತಿ ವಾಪಸ್: ಜಿಲ್ಲೆಯ ಕವಿತಾಳ ಸಮೀಪದ ಲಕ್ಷ್ಮೀಕ್ಯಾಂಪ್ಗೆ ವಿದೇಶದಿಂದ ವಾಪಸಾಗಿರುವ ದಂಪತಿಯ ಮನೆಗೆ ತಹಶೀಲ್ದಾರ್ ಮತ್ತು ತಾಲ್ಲೂಕು ಆರೋಗ್ಯಾಧಿಕಾರಿ ಭೇಟಿ ನೀಡಿ ಪರಿಶೀಲಿಸಿ, ಸೂಕ್ತ ತಿಳಿವಳಿಕೆ ನೀಡಿದರು.</p>.<p>ಸೌದಿ ಅರೇಬಿಯಾದ ಅಬುದಾಬಿಯಲ್ಲಿ ಕೆಲವು ದಿನಗಳವರೆಗೆ ನೆಲೆಸಿದ್ದ ದಂಪತಿ ಈಗ ವಾಪಸಾಗಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>