ಮನೆಯಿಂದ ಹೊರಬರದಂತೆ ಸೂಚನೆ: ಕಲಬುರ್ಗಿಯಲ್ಲಿ ಮಾರ್ಚ್ 10 ರಂದು ನಡೆದಿದ್ದ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದ ಕವಿತಾಳದ ವ್ಯಕ್ತಿಯೊಬ್ಬರ ಬಗ್ಗೆ ಸುಳಿವು ಗೊತ್ತಾಗುತ್ತಿದ್ದಂತೆ, ಆರೋಗ್ಯ ಇಲಾಖೆಯ ಸಿಬ್ಬಂದಿ ಅವರ ಮನೆಗೆ ಧಾವಿಸಿದರು. ಆರೋಗ್ಯ ತಪಾಸಣೆ ಕೈಗೊಂಡು, ಯಾವುದೇ ಕಾರಣಕ್ಕೂ ಮನೆಯಿಂದ ಹೊರಗಡೆ ಬಾರದಂತೆ ತಿಳಿವಳಿಕೆ ನೀಡಿದರು.