<p><strong>ರಾಯಚೂರು</strong>: ಫೇಸ್ಬುಕ್ನಲ್ಲಿ ಟ್ರೇಡ್ ಎಂಐಎಫ್ಎಸ್ ಜಾಹೀರಾತಿಗೆ ಮರಳಾಗಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದ ರಾಯಚೂರಿನ ವ್ಯಕ್ತಿಗೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ₹18.29 ಲಕ್ಷ ಮರಳಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು.</p><p>ವಿದ್ಯಾನಗರದ ಲಕ್ಷ್ಮಿಕಾಂತ ವೆಂಕೋಬಾಚಾರ್ ಅವರು 2020ರ ಆಗಸ್ಟ್ನಿಂದ ಏಪ್ರಿಲ್ 2021ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗೆ ₹ 58,57,450 ಹೂಡಿಕೆ ಮಾಡಿದ್ದರು. ಲಾಭಾಂಶ ಬಾರದಿದ್ದಾಗ ಮೋಸ ಹೋಗಿರುವುದು ಮನವರಿಕೆಯಾಗಿದೆ. ಹೀಗಾಗಿ 2021ರ ಅಕ್ಟೋಬರ್ 25ರಂದು ಲಕ್ಷ್ಮಿಕಾಂತ ವೆಂಕೋಬಾಚಾರ್ ಅವರು ಸೈಬರ್ ಠಾಣೆಗೆ ದೂರಿದ್ದರು ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.</p><p>ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಲಕರೈನ ಬಥುರುಸ್ಮಾನ್ ಮೊಹಮ್ಮದ್ ಹುಸೇನ್ ಎನ್ನುವವನು ತನ್ನ ಸಂಬಂಧಿಕರ ಖಾತೆಗೆ ಅವರಿಗೆ ತಿಳಿಯದಂತೆ ಹಣ ಹಾಕಿಸಿಕೊಂಡಿದ್ದ. ಆರೋಪಿ ಮೃತಪಟ್ಟಿದ್ದು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಫಿರ್ಯಾದಿದಾರರಿಗೆ ₹18,29,425 ಹಣ ಮರಳಿಸಲಾಗಿದೆ ಎಂದು ತಿಳಿಸಿದರು.</p><p>ಸೈಬರ್ ಕ್ರೈಂ ಠಾಣೆಯ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ, ತನಿಖಾ ಸಹಾಯಕ ರಾಜಪ್ಪ, ಪೊಲೀಸ್ ಇನ್ಸ್ಪೆಕ್ಟರ್ ರಾಜಕುಮಾರ ವಾಜಂತ್ರಿ, ವಿಕ್ರಂಸಿಂಹ ರೆಡ್ಡಿ, ಪ್ರವೀಣಕುಮಾರ ಪ್ರಕರಣ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.</p><p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ1ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ2 ಹರೀಶ್ ಹಾಗೂ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಫೇಸ್ಬುಕ್ನಲ್ಲಿ ಟ್ರೇಡ್ ಎಂಐಎಫ್ಎಸ್ ಜಾಹೀರಾತಿಗೆ ಮರಳಾಗಿ ಹೂಡಿಕೆ ಮಾಡಿ ಹಣ ಕಳೆದುಕೊಂಡಿದ್ದ ರಾಯಚೂರಿನ ವ್ಯಕ್ತಿಗೆ ಸೈಬರ್ ಕ್ರೈಂ ವಿಭಾಗದ ಅಧಿಕಾರಿಗಳು ₹18.29 ಲಕ್ಷ ಮರಳಿ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು.</p><p>ವಿದ್ಯಾನಗರದ ಲಕ್ಷ್ಮಿಕಾಂತ ವೆಂಕೋಬಾಚಾರ್ ಅವರು 2020ರ ಆಗಸ್ಟ್ನಿಂದ ಏಪ್ರಿಲ್ 2021ರ ಅವಧಿಯಲ್ಲಿ ವಿವಿಧ ಬ್ಯಾಂಕ್ ಖಾತೆಗೆ ₹ 58,57,450 ಹೂಡಿಕೆ ಮಾಡಿದ್ದರು. ಲಾಭಾಂಶ ಬಾರದಿದ್ದಾಗ ಮೋಸ ಹೋಗಿರುವುದು ಮನವರಿಕೆಯಾಗಿದೆ. ಹೀಗಾಗಿ 2021ರ ಅಕ್ಟೋಬರ್ 25ರಂದು ಲಕ್ಷ್ಮಿಕಾಂತ ವೆಂಕೋಬಾಚಾರ್ ಅವರು ಸೈಬರ್ ಠಾಣೆಗೆ ದೂರಿದ್ದರು ಎಂದು ನಗರದಲ್ಲಿ ಮಂಗಳವಾರ ಮಾಧ್ಯಮ ಗೋಷ್ಠಿಯಲ್ಲಿ ಹೇಳಿದರು.</p><p>ತಮಿಳುನಾಡಿನ ರಾಮನಾಥಪುರಂ ಜಿಲ್ಲೆಯ ಕೀಲಕರೈನ ಬಥುರುಸ್ಮಾನ್ ಮೊಹಮ್ಮದ್ ಹುಸೇನ್ ಎನ್ನುವವನು ತನ್ನ ಸಂಬಂಧಿಕರ ಖಾತೆಗೆ ಅವರಿಗೆ ತಿಳಿಯದಂತೆ ಹಣ ಹಾಕಿಸಿಕೊಂಡಿದ್ದ. ಆರೋಪಿ ಮೃತಪಟ್ಟಿದ್ದು, ನ್ಯಾಯಾಲಯಕ್ಕೆ ದೋಷಾರೋಪಪಟ್ಟಿ ಸಲ್ಲಿಸಲಾಗಿದೆ. ಫಿರ್ಯಾದಿದಾರರಿಗೆ ₹18,29,425 ಹಣ ಮರಳಿಸಲಾಗಿದೆ ಎಂದು ತಿಳಿಸಿದರು.</p><p>ಸೈಬರ್ ಕ್ರೈಂ ಠಾಣೆಯ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ, ತನಿಖಾ ಸಹಾಯಕ ರಾಜಪ್ಪ, ಪೊಲೀಸ್ ಇನ್ಸ್ಪೆಕ್ಟರ್ ರಾಜಕುಮಾರ ವಾಜಂತ್ರಿ, ವಿಕ್ರಂಸಿಂಹ ರೆಡ್ಡಿ, ಪ್ರವೀಣಕುಮಾರ ಪ್ರಕರಣ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಹೇಳಿದರು.</p><p>ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ1ಕುಮಾರಸ್ವಾಮಿ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ2 ಹರೀಶ್ ಹಾಗೂ ಡಿವೈಎಸ್ಪಿ ವೆಂಕಟೇಶ ಹೊಗಿಬಂಡಿ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>