ರಾಯಚೂರು:ಕೊರೊನಾ ಸಂಕಷ್ಟದ ಸಮಯದಲ್ಲೂ ಪೌರಕಾರ್ಮಿಕರು ನಿಷ್ಠೆಯಿಂದ ಬಿಡುವಿಲ್ಲದೆ ದುಡಿಮೆ ಮಾಡಿರುವುದು ಅನನ್ಯವಾಗಿದೆ ಎಂದು ನಗರಸಭೆ ಸದಸ್ಯ ಜಯಣ್ಣ ಹೇಳಿದರು.
ನಗರದ ಶ್ರೀಸಾಯಿ ಮಂದಿರ ಆವರಣದಲ್ಲಿ ಇನ್ಫೋಸಿಸ್ ಫೌಂಡೇಷನ್, ಪಾವಗಡದ ರಾಮಕೃಷ್ಣ ಆಶ್ರಮ, ಭಾರತೀಯ ರೆಡ್ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಪೌರಕಾರ್ಮಿಕರಿಗೆ ಅಗತ್ಯ ದಿನಬಳಕೆ ವಸ್ತುಗಳ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸರ್ಕಾರ ಯಾವುದೇ ಮನ್ಸೂಚನೆ ನೀಡದೆ ಲಾಕ್ಡೌನ್ ಘೋಷಿಸಿದ್ದರಿಂದ ಎಲ್ಲರೂ ಸಂಕಷ್ಟ ಎದುರಿಸುವಂತಾಯಿತು. ಪೌರಕಾರ್ಮಿಕರು ಸವಾಲುಗಳ ಮಧ್ಯೆಯೂ ಕೆಲಸ ಮಾಡಿದ್ದಾರೆ ಎಂದರು.
ಕಿರಣ ಆದೋನಿ, ಹರೀಶ ನಾಡಗೌಡ, ಡಿಂಗ್ರಿ ನರೇಶ ಮತ್ತಿತರರು ಇದ್ದರು.