<p><strong>ಲಿಂಗಸುಗೂರು:</strong> ಪಟ್ಟಣದ ಈಶ್ವರ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿದೆ. ಕೊಳಚೆ ನೀರಿನಲ್ಲಿಯೇ ಅಡ್ಡಾಡುವ ಪರಿಸ್ಥಿತಿ ಇದ್ದು ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಸರ್ಕಾರಿ ಆಸ್ಪತ್ರೆ ಮತ್ತು ಸುತ್ತಲಿನ ಮನೆಗಳ ಬಚ್ಚಲು ನೀರು ಹರಿದು ಹೋಗಲು ಸುಮಾರು ವರ್ಷಗಳ ಹಿಂದೆ ಚರಂಡಿ ನಿರ್ಮಾಣ ಮಾಡಲಾಗಿದೆ. ಅದು ಚಿಕ್ಕದಾಗಿದ್ದರಿಂದ, ಹೂಳು ತೆಗೆಯದ್ದರಿಂದ ಸಮಸ್ಯೆಯಾಗಿದೆ ಜನ ಅಸಮಾಧಾನ ಹೊರಹಾಕಿದ್ದಾರೆ.</p>.<p>ಈ ಮಾರ್ಗವಾಗಿ ಅನೇಕ ಶಾಲೆ, ದೇವಸ್ಥಾನ ಇರುವುದರಿಂದ ಹೆಚ್ಚಿನ ಜನ ಸಂಚರಿಸುತ್ತಾರೆ. ಗಡಿಯಾರ ವೃತ್ತದಿಂದ ಮುಕ್ತಿಧಾಮ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ನೆಲ ಅಗೆಯುವ ವೇಳೆ ಚರಂಡಿ ಧ್ವಂಸವಾಗಿದ್ದರಿಂದ ಕೊಳಚೆ ನೀರು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಲ್ಲಿ ನಿಲ್ಲುತ್ತದೆ. ಮನೆಗಳ ಬಾಗಿಲುವರೆಗೆ ನೀರು ನಿಂತಿವೆ. ಈ ಬಗ್ಗೆ ಪುರಸಭೆ ಆಡಳಿತಕ್ಕೆ ಸಾಕಷ್ಟು ಸಲ ಮೌಖಿಕ ಮತ್ತು ಲಿಖಿತ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಿವಾಸಿಗಳು.</p>.<p>ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಇಲ್ಲಿನ ನಿವಾಸಿಗಳಾದ ಮಲ್ಲಿಕಾರ್ಜುನ ಪಾಟೀಲ, ಬಸನಗೌಡ, ರಾಜು ಆಗ್ರಹಿಸಿದ್ದಾರೆ.</p>.<p>ಈಶ್ವರ ದೇವಸ್ಥಾನ ಪಕ್ಕದಲ್ಲಿ ರಸ್ತೆಯಲ್ಲಿ ಚರಂಡಿ ನೀರು ನಿಲ್ಲುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಸಿಬ್ಬಂದಿ ಕಳುಹಿಸಿ ಸಮಸ್ಯೆ ಪರಿಹರಿಸುವೆ ಎಂದು ಪುರಸಭೆ ಮುಖ್ಯಾಧಿಕಾರಿ ರವಿ ಶಿರಗುಂಪಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು:</strong> ಪಟ್ಟಣದ ಈಶ್ವರ ದೇವಸ್ಥಾನ ಪಕ್ಕದ ರಸ್ತೆಯಲ್ಲಿ ಚರಂಡಿ ನೀರು ಸಂಗ್ರಹವಾಗುತ್ತಿದೆ. ಕೊಳಚೆ ನೀರಿನಲ್ಲಿಯೇ ಅಡ್ಡಾಡುವ ಪರಿಸ್ಥಿತಿ ಇದ್ದು ನಿವಾಸಿಗಳು ಪುರಸಭೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.</p>.<p>ಸರ್ಕಾರಿ ಆಸ್ಪತ್ರೆ ಮತ್ತು ಸುತ್ತಲಿನ ಮನೆಗಳ ಬಚ್ಚಲು ನೀರು ಹರಿದು ಹೋಗಲು ಸುಮಾರು ವರ್ಷಗಳ ಹಿಂದೆ ಚರಂಡಿ ನಿರ್ಮಾಣ ಮಾಡಲಾಗಿದೆ. ಅದು ಚಿಕ್ಕದಾಗಿದ್ದರಿಂದ, ಹೂಳು ತೆಗೆಯದ್ದರಿಂದ ಸಮಸ್ಯೆಯಾಗಿದೆ ಜನ ಅಸಮಾಧಾನ ಹೊರಹಾಕಿದ್ದಾರೆ.</p>.<p>ಈ ಮಾರ್ಗವಾಗಿ ಅನೇಕ ಶಾಲೆ, ದೇವಸ್ಥಾನ ಇರುವುದರಿಂದ ಹೆಚ್ಚಿನ ಜನ ಸಂಚರಿಸುತ್ತಾರೆ. ಗಡಿಯಾರ ವೃತ್ತದಿಂದ ಮುಕ್ತಿಧಾಮ ನಡೆಯುತ್ತಿರುವ ಸಿಸಿ ರಸ್ತೆ ಕಾಮಗಾರಿಗೆ ನೆಲ ಅಗೆಯುವ ವೇಳೆ ಚರಂಡಿ ಧ್ವಂಸವಾಗಿದ್ದರಿಂದ ಕೊಳಚೆ ನೀರು ಹೆಚ್ಚಿನ ಪ್ರಮಾಣದಲ್ಲಿ ರಸ್ತೆಯಲ್ಲಿ ನಿಲ್ಲುತ್ತದೆ. ಮನೆಗಳ ಬಾಗಿಲುವರೆಗೆ ನೀರು ನಿಂತಿವೆ. ಈ ಬಗ್ಗೆ ಪುರಸಭೆ ಆಡಳಿತಕ್ಕೆ ಸಾಕಷ್ಟು ಸಲ ಮೌಖಿಕ ಮತ್ತು ಲಿಖಿತ ದೂರು ನೀಡಿದರೂ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ ನಿವಾಸಿಗಳು.</p>.<p>ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವ ಕೆಲಸ ಮಾಡಬೇಕು ಎಂದು ಇಲ್ಲಿನ ನಿವಾಸಿಗಳಾದ ಮಲ್ಲಿಕಾರ್ಜುನ ಪಾಟೀಲ, ಬಸನಗೌಡ, ರಾಜು ಆಗ್ರಹಿಸಿದ್ದಾರೆ.</p>.<p>ಈಶ್ವರ ದೇವಸ್ಥಾನ ಪಕ್ಕದಲ್ಲಿ ರಸ್ತೆಯಲ್ಲಿ ಚರಂಡಿ ನೀರು ನಿಲ್ಲುತ್ತಿರುವ ಬಗ್ಗೆ ಅಲ್ಲಿನ ನಿವಾಸಿಗಳು ನನ್ನ ಗಮನಕ್ಕೆ ತಂದಿದ್ದಾರೆ. ಸಿಬ್ಬಂದಿ ಕಳುಹಿಸಿ ಸಮಸ್ಯೆ ಪರಿಹರಿಸುವೆ ಎಂದು ಪುರಸಭೆ ಮುಖ್ಯಾಧಿಕಾರಿ ರವಿ ಶಿರಗುಂಪಿ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>