ಪುರಸಭೆ ಮುಖ್ಯಾಧಿಕಾರಿ ಜಗನ್ನಾಥ ಮಾತನಾಡಿ, ‘ಕೆರೆ ಅಂಗಳದ ಕೆಲ ಪ್ರದೇಶದಲ್ಲಿ ಹಾಗೂ ಒಡ್ಡಿನ ಮೇಲೆ ಮುಳ್ಳು–ಕಂಟಿ, ಗಿಡ–ಮರ ಬೆಳೆದಿರುವುದು ನಿಜ. ಕೆರೆಯಲ್ಲಿ ನೀರು ಕಡಿಮೆ ಆಗಿದೆ. ಮುಳ್ಳು–ಕಂಟಿ ಮತ್ತು ಕಸ–ಕಡ್ಡಿ ತೆರವಿಗೆ ಈಗಾಗಲೇ ಸೂಚಿಸಲಾಗಿದೆ. ನೀರು ಭರ್ತಿ ಮಾಡುವಷ್ಟರಲ್ಲಿ ಸ್ವಚ್ಛತಾ ಕಾರ್ಯ ಮುಗಿಯಲಿದೆ’ ಎಂದು ಅವರು ಹೇಳಿದರು.