ಎ.ದರ್ಜೆ ಭೂಮಿಯ ಪೈಕಿ 450 ಎಕರೆಯನ್ನು ಈ ಹಿಂದೆ ಭೂ ಹೀನರಿಗೆ ಹಂಚಲಾಗಿದೆ. ಆದಾಗ್ಯೂ ನಕಲಿ ವಂಶಾವಳಿ, ನಕಲಿ ಹೇಳಿಕೆಗಳಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಾನೂನು ಬಾಹಿರವಾಗಿ ನಾಡಗೌಡರ ಕುಟುಂಬ ಭೂ ರೈತರಿಗೆ ಸಿಗಬೇಕಾದ ಭೂಮಿಯನ್ನು ಸ್ವಾಧೀನದಲ್ಲಿಟ್ಟುಕೊಂಡಿದೆ. ಸಮಗ್ರ ತನಿಖೆ ಕೈಗೊಂಡರೆ ಸಹಸ್ರಾರು ಎಕರೆ ಭೂಮಿ ರೈತರಿಗೆ ಸಿಗುತ್ತದೆ ಎಂದು ಮುಖ್ಯಮಂತ್ರಿ ಅವರಿಗೆ ವಿವರಿಸಿದರು.