<p><strong>ರಾಯಚೂರು</strong>: ನಗರದ ಹೊರವಲಯದ ಯರಮರಸ್ ಬೈಪಾಸ್ ಬಳಿ ಸೋಮವಾರ ರಸ್ತೆ ಬದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ತಂದೆ, ಮಗನ ಮೇಲೆ ಲಾರಿ ಹಾಯ್ದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p><p>ಯರಮರಸ್ನ ಮಿಚ್ಚರ್ ನಾಗಪ್ಪ (65) ಹಾಗೂ ಮಗ ಮಿಚ್ಚರ್ ರಮೇಶ (36) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಮೇಶನ ಹೊಟ್ಟೆ ಮೇಲೆ ಲಾರಿ ಹಾಯ್ದು ದೇಹ ತುಂಡಾಗಿದೆ. ಲಾರಿ ಬೈಪಾಸ್ ರಸ್ತೆಯಿಂದ ಶಕ್ತಿನಗರದ ಕಡೆಗೆ ಹೊರಟಿತ್ತು. ಎಡ ಬದಿಗೆ ತಿರುವಿನಲ್ಲಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ರಸ್ತೆ ಬದಿಗೆ ನಿಂತಿದ್ದ ವ್ಯಕ್ತಿ ಮೇಲೆ ಲಾರಿ ಹರಿದಿದೆ.</p><p>ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ</p>
<p><strong>ರಾಯಚೂರು</strong>: ನಗರದ ಹೊರವಲಯದ ಯರಮರಸ್ ಬೈಪಾಸ್ ಬಳಿ ಸೋಮವಾರ ರಸ್ತೆ ಬದಿಗೆ ಮೊಬೈಲ್ನಲ್ಲಿ ಮಾತನಾಡುತ್ತಿದ್ದ ನಿಂತಿದ್ದ ತಂದೆ, ಮಗನ ಮೇಲೆ ಲಾರಿ ಹಾಯ್ದು ಇಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ.</p><p>ಯರಮರಸ್ನ ಮಿಚ್ಚರ್ ನಾಗಪ್ಪ (65) ಹಾಗೂ ಮಗ ಮಿಚ್ಚರ್ ರಮೇಶ (36) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ರಮೇಶನ ಹೊಟ್ಟೆ ಮೇಲೆ ಲಾರಿ ಹಾಯ್ದು ದೇಹ ತುಂಡಾಗಿದೆ. ಲಾರಿ ಬೈಪಾಸ್ ರಸ್ತೆಯಿಂದ ಶಕ್ತಿನಗರದ ಕಡೆಗೆ ಹೊರಟಿತ್ತು. ಎಡ ಬದಿಗೆ ತಿರುವಿನಲ್ಲಿ ಎದುರಿಗೆ ಬರುತ್ತಿದ್ದ ವಾಹನಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದಾಗ ರಸ್ತೆ ಬದಿಗೆ ನಿಂತಿದ್ದ ವ್ಯಕ್ತಿ ಮೇಲೆ ಲಾರಿ ಹರಿದಿದೆ.</p><p>ಗ್ರಾಮೀಣ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ</p>