’ಪ್ರವಾಹ ಇದೇ ಸ್ಥಿತಿ ಮುಂದುವರೆದರೆ ಜಮೀನುಗಳ ಬೆಳೆಯ ಜತೆಗೆ ಮಣ್ಣು ಕೊಚ್ಚಿ ಹೋಗಿ ಭೂಮಿ ಬರಾಡಗುತ್ತವೆ. ಸರ್ಕಾರ ಪ್ರವಾಹ ಸಂದರ್ಭಗಳಲ್ಲಿ ಇಲ್ಲಿವರೆಗೆ ಬಿಡಿಗಾಸೂ ನೀಡಿಲ್ಲ. ನದಿಗೆ ನೀರು ಬಿಡುವ ಜಿಲ್ಲಾಡಳಿತ, ರೈತರಿಗೆ ಮಾಹಿತಿ ನೀಡದ ಕಾರಣ, ನದಿ ದಡದಲ್ಲಿರುವ ಪಂಪ್ಸೆಟ್ಗಳು ಸಂಪೂರ್ಣ ಮುಳುಗಡೆ ಆಗಿವೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಸರ್ವೆ ನಡೆಸಿ ವೈಜ್ಞಾನಿಕ ಪರಿಹಾರ ಕೊಡಿಸಬೇಕು‘ ಎಂದು ರೈತ ಸಂಘ ಹಾಗೂ ಹಸಿರು ಸೇನೆಯ ದೇವಸೂಗೂರು ಗ್ರಾಮ ಘಟಕದ ಅಧ್ಯಕ್ಷ ನರಸಪ್ಪ ಒತ್ತಾಯಿಸಿದ್ದಾರೆ.