ಶಕ್ತಿನಗರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಳುಗಿ ನಾಪತ್ತೆಯಾದ ನಾಲ್ವರಿಗಾಗಿ ಮಂಗಳವಾರ ನಸುಕಿನ ಜಾವ 5 ರಿಂದ ಶೋಧ ಕಾರ್ಯ ಆರಂಭವಾಗಿದೆ.
ರಾಯಚೂರು ತಹಶಿಲ್ದಾರ್ ಡಾ. ಹಂಪಣ್ಣ ಸಜ್ಜನ್, ಸಿಪಿಐ ಅಂಬರಾಯ್ ಕಮಾನಮೆನಿನ್, ಶಕ್ತಿ ನಗರ ಠಾಣೆ ಪಿಎಸ್ಐ ಎಚ್. ಹುಲಿಗೇಶ ಓಂಕಾರ, ಗ್ರಾಮಲೆಕ್ಕಾಧಿಕಾರಿ ಸುರೇಶ ಮತ್ತು ತೆಲಂಗಾಣದ ಮಖ್ತಲ್ ತಹಶಿಲ್ದಾರ್ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿಯೇ ಬೀಡು ಬಿಟ್ಟಿದ್ದಾರೆ.
ಸೋಮವಾರ ರಾತ್ರಿ ಜಿಲ್ಲಾಧಿಕಾರಿ ವೆಂಕಟೇಶ ಕುಮಾರ, ಉಪ ವಿಭಾಗಧಿಕಾರಿ ಸಂತೋಷಕಾಮಗೌಡ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಪ್ರಕಾಶ ನಿಕ್ಕಂ ಅವರು ಸ್ಥಳಕ್ಕೆ ಭೇಟಿ ನೀಡಿ ಮಖ್ತಲ್ ಅಧಿಕಾರಿಗಳಿಂದ ಮಾಹಿತಿ ಪಡೆದರು.