<p><strong>ಸಿಂಧನೂರು</strong>: ಹೆಣ್ಣುಮಗುವಿನ ಭವಿಷ್ಯದ ಶಿಕ್ಷಣ ಮತ್ತು ಆರ್ಥಿಕ ಭದ್ರತೆಯ ಉದ್ದೇಶದಿಂದ ನಗರದ ಉಮಾಶಂಕರ ಫೌಂಡೇಶನ್ನಿಂದ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣುಮಗುವಿಗೆ ವಿಶೇಷ ಉಳಿತಾಯದ ‘ಮೇಧಾಶ್ರೀ ಭವಿಷ್ಯ’ ನಿಧಿ ಯೋಜನೆಯಡಿಯಲ್ಲಿ ₹10 ಸಾವಿರ ಮುದ್ದತ್ ಠೇವಣಿ ಇಡಲು ತೀರ್ಮಾನಿಸಿರುವುದಾಗಿ ಫೌಂಡೇಶನ್ ಅಧ್ಯಕ್ಷ ಎಸ್.ಎಸ್.ಹಿರೇಮಠ ಮತ್ತು ಕಾರ್ಯದರ್ಶಿ ಶಿವಕುಮಾರ ಹಿರೇಮಠ ತಿಳಿಸಿದ್ದಾರೆ.</p>.<p>ಭಾನುವಾರ ಹೇಳಿಕೆ ನೀಡಿರುವ ಅವರು, ‘ವಾಣಿಜ್ಯೋದ್ಯಮಿ ರಾಜೇಶ್ ಹಿರೇಮಠ ಅವರ ಜನ್ಮದಿನ ಜು.27ರಂದು ಇದ್ದು, ಅಂದು ಜನಿಸಿದ ಹೆಣ್ಣುಮಗುವಿಗೆ ಮಾತ್ರ ಈ ಠೇವಣಿ ಅನ್ವಯಿಸುತ್ತಿದೆ. ಸ್ತ್ರೀ ಸಬಲೀಕರಣ, ಸ್ತ್ರೀ ಪಾರಮ್ಯವನ್ನು ಹೆಚ್ಚಿಸುವ ಪ್ರಾಥಮಿಕ ಗುರಿಯೊಂದಿಗೆ ರಾಜೇಶ್ ಹಿರೇಮಠ ಅವರು ಕಟ್ಟಿಕೊಂಡಿರುವ ಕನಸುಗಳನ್ನು ನನಸು ಮಾಡಲು ಅವರ ಜನ್ಮದಿನದ ಅಂಗವಾಗಿ ಈ ಯೋಜನೆ ರೂಪಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಿಂಧನೂರು</strong>: ಹೆಣ್ಣುಮಗುವಿನ ಭವಿಷ್ಯದ ಶಿಕ್ಷಣ ಮತ್ತು ಆರ್ಥಿಕ ಭದ್ರತೆಯ ಉದ್ದೇಶದಿಂದ ನಗರದ ಉಮಾಶಂಕರ ಫೌಂಡೇಶನ್ನಿಂದ ತಾಲ್ಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಹೆಣ್ಣುಮಗುವಿಗೆ ವಿಶೇಷ ಉಳಿತಾಯದ ‘ಮೇಧಾಶ್ರೀ ಭವಿಷ್ಯ’ ನಿಧಿ ಯೋಜನೆಯಡಿಯಲ್ಲಿ ₹10 ಸಾವಿರ ಮುದ್ದತ್ ಠೇವಣಿ ಇಡಲು ತೀರ್ಮಾನಿಸಿರುವುದಾಗಿ ಫೌಂಡೇಶನ್ ಅಧ್ಯಕ್ಷ ಎಸ್.ಎಸ್.ಹಿರೇಮಠ ಮತ್ತು ಕಾರ್ಯದರ್ಶಿ ಶಿವಕುಮಾರ ಹಿರೇಮಠ ತಿಳಿಸಿದ್ದಾರೆ.</p>.<p>ಭಾನುವಾರ ಹೇಳಿಕೆ ನೀಡಿರುವ ಅವರು, ‘ವಾಣಿಜ್ಯೋದ್ಯಮಿ ರಾಜೇಶ್ ಹಿರೇಮಠ ಅವರ ಜನ್ಮದಿನ ಜು.27ರಂದು ಇದ್ದು, ಅಂದು ಜನಿಸಿದ ಹೆಣ್ಣುಮಗುವಿಗೆ ಮಾತ್ರ ಈ ಠೇವಣಿ ಅನ್ವಯಿಸುತ್ತಿದೆ. ಸ್ತ್ರೀ ಸಬಲೀಕರಣ, ಸ್ತ್ರೀ ಪಾರಮ್ಯವನ್ನು ಹೆಚ್ಚಿಸುವ ಪ್ರಾಥಮಿಕ ಗುರಿಯೊಂದಿಗೆ ರಾಜೇಶ್ ಹಿರೇಮಠ ಅವರು ಕಟ್ಟಿಕೊಂಡಿರುವ ಕನಸುಗಳನ್ನು ನನಸು ಮಾಡಲು ಅವರ ಜನ್ಮದಿನದ ಅಂಗವಾಗಿ ಈ ಯೋಜನೆ ರೂಪಿಸಲಾಗಿದೆ’ ಎಂದು ಅವರು ಹೇಳಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>