<p><strong>ಹಟ್ಟಿ ಚಿನ್ನದ ಗಣಿ (ರಾಯಚೂರು):</strong>ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 392 ಕೆಜಿ ಚಿನ್ನ ತಯಾರಿಸಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 20 ಕೆಜಿ ಅಧಿಕ ಚಿನ್ನ ತಯಾರಿಕೆಯಾಗಿದೆ.</p>.<p>2019–20 ಸಾಲಿನಲ್ಲಿ ಒಟ್ಟು 1,750 ಕೆಜಿ ಚಿನ್ನ ತಯಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ. 2018–19ನೇ ಸಾಲಿನಲ್ಲಿ 1,700 ಕೆಜಿ ಚಿನ್ನ ತಯಾರಿಸುವ ಗುರಿ ಹೊಂದಿದ್ದರೂ 1,661 ಕೆಜಿ ಸಿದ್ಧಪಡಿಸುವುದಕ್ಕೆ ಸಾಧ್ಯವಾಗಿತ್ತು. 2017–18 ಸಾಲಿನಲ್ಲಿ 1,640 ಕೆಜಿ ಚಿನ್ನ ತಯಾರಿಸಲಾಗಿತ್ತು.</p>.<p>ಒಂಟು ಟನ್ ಅದಿರಿನಿಂದ ಸರಾಸರಿ 2.62 ಗ್ರಾಂ ಚಿನ್ನ ಪಡೆಯುವುದಕ್ಕೆ ಸಾಧ್ಯವಾಗಿದೆ ಎಂದು ಕಂಪೆನಿ ತಿಳಿಸಿದೆ. 2017- 18 ನೇ ಸಾಲಿನಲ್ಲಿ ₹30 ಕೋಟಿ ಹಾಗೂ 2018- 19ನೇ ಸಾಲಿನಲ್ಲಿ ₹80 ಕೋಟಿ ನಿವ್ವಳ ಲಾಭ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಕಂಪೆನಿಯ ನಿವ್ವಳ ಲಾಭ ಏರಿಕೆಯಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.</p>.<p>‘ಗಣಿ ಕಂಪನಿಯು ಪ್ರತಿದಿನ 2,000 ಟನ್ ಅದಿರು ಸಂಸ್ಕರಣೆ ಸಾಮರ್ಥ್ಯ ಹೊಂದಿದ್ದು, ಮುಂದಿನ ವರ್ಷ ಎರಡು ಹೊಸ ಮಿಲ್ ಪ್ರಾರಂಭಿಸಲಾಗುವುದು. ಆನಂತರ ದಿನಕ್ಕೆ 3,500 ಟನ್ ಅದಿರು ಸಂಸ್ಕರಿಸಲಾಗುವುದು’ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕಡಾ.ರಿಚರ್ಡ ವಿನ್ಸಂಟ್ ಡಿಸೋಜಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಟ್ಟಿ ಚಿನ್ನದ ಗಣಿ (ರಾಯಚೂರು):</strong>ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ 392 ಕೆಜಿ ಚಿನ್ನ ತಯಾರಿಸಲಾಗಿದ್ದು, ಹಿಂದಿನ ವರ್ಷಕ್ಕೆ ಹೋಲಿಸಿದರೆ 20 ಕೆಜಿ ಅಧಿಕ ಚಿನ್ನ ತಯಾರಿಕೆಯಾಗಿದೆ.</p>.<p>2019–20 ಸಾಲಿನಲ್ಲಿ ಒಟ್ಟು 1,750 ಕೆಜಿ ಚಿನ್ನ ತಯಾರಿಸುವ ಗುರಿ ಇಟ್ಟುಕೊಳ್ಳಲಾಗಿದೆ. 2018–19ನೇ ಸಾಲಿನಲ್ಲಿ 1,700 ಕೆಜಿ ಚಿನ್ನ ತಯಾರಿಸುವ ಗುರಿ ಹೊಂದಿದ್ದರೂ 1,661 ಕೆಜಿ ಸಿದ್ಧಪಡಿಸುವುದಕ್ಕೆ ಸಾಧ್ಯವಾಗಿತ್ತು. 2017–18 ಸಾಲಿನಲ್ಲಿ 1,640 ಕೆಜಿ ಚಿನ್ನ ತಯಾರಿಸಲಾಗಿತ್ತು.</p>.<p>ಒಂಟು ಟನ್ ಅದಿರಿನಿಂದ ಸರಾಸರಿ 2.62 ಗ್ರಾಂ ಚಿನ್ನ ಪಡೆಯುವುದಕ್ಕೆ ಸಾಧ್ಯವಾಗಿದೆ ಎಂದು ಕಂಪೆನಿ ತಿಳಿಸಿದೆ. 2017- 18 ನೇ ಸಾಲಿನಲ್ಲಿ ₹30 ಕೋಟಿ ಹಾಗೂ 2018- 19ನೇ ಸಾಲಿನಲ್ಲಿ ₹80 ಕೋಟಿ ನಿವ್ವಳ ಲಾಭ ಬಂದಿತ್ತು. ಇತ್ತೀಚಿನ ವರ್ಷಗಳಲ್ಲಿ ಕಂಪೆನಿಯ ನಿವ್ವಳ ಲಾಭ ಏರಿಕೆಯಾಗುತ್ತಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.</p>.<p>‘ಗಣಿ ಕಂಪನಿಯು ಪ್ರತಿದಿನ 2,000 ಟನ್ ಅದಿರು ಸಂಸ್ಕರಣೆ ಸಾಮರ್ಥ್ಯ ಹೊಂದಿದ್ದು, ಮುಂದಿನ ವರ್ಷ ಎರಡು ಹೊಸ ಮಿಲ್ ಪ್ರಾರಂಭಿಸಲಾಗುವುದು. ಆನಂತರ ದಿನಕ್ಕೆ 3,500 ಟನ್ ಅದಿರು ಸಂಸ್ಕರಿಸಲಾಗುವುದು’ ಎಂದು ಕಂಪನಿ ವ್ಯವಸ್ಥಾಪಕ ನಿರ್ದೇಶಕಡಾ.ರಿಚರ್ಡ ವಿನ್ಸಂಟ್ ಡಿಸೋಜಾ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>