ಸೋಮವಾರ ಅರ್ಧಗಂಟೆ ಸುರಿದ ಬಿರುಸಿನ ಮಳೆಯಿಂದಾಗಿ ಎಪಿಎಂಸಿ ಆವರಣದಲ್ಲಿ ನೀರು ಸಂಗ್ರಹವಾಗಿತ್ತು. ಚರಂಡಿಗಳು ಭರ್ತಿಯಾಗಿದ್ದಲ್ಲದೆ, ಮೊದಲನೇ ಪ್ಲಾಟ್ನಲ್ಲಿ ನೀರು ನುಗ್ಗಿತ್ತು. ಆತಂಕಕ್ಕೊಳಗಾದ ರೈತರು ಭತ್ತ, ಶೇಂಗಾ ಹಾಗೂ ಈರುಳ್ಳಿ ಸುರಕ್ಷಿತವಾಗಿಟ್ಟುಕೊಳ್ಳಲು ಹರಸಾಹಸ ಮಾಡಿದರು. ಸುತ್ತಲೂ ಮರಳುಗುಡ್ಡೆ ಹಾಕಿದರೂ ನೀರು ನುಗ್ಗಿತು.