<p><strong>ಸರ್ಜಾಪುರ (ಶಕ್ತಿನಗರ):</strong> ‘ಮಹಿಳೆಯರು ಆರ್ಥಿಕ ಅಭಿವೃದ್ಧಿ ಸಾಧಿಸಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ ಹೇಳಿದರು.</p>.<p>ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸರ್ಜಾಪೂರ ಗ್ರಾಮದಲ್ಲಿ 16 ನೂತನ ಸ್ವ ಸಹಾಯ ಸಂಘಗಳ ಉದ್ಘಾಟನೆ ಸಮಾರಂಭ ಮತ್ತು ದಾಖಲಾತಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಧರ್ಮಸ್ಥಳ ಕ್ಷೇತದ್ರ ಧರ್ಮಾಧಿಕಾರಿ ಹಾಗೂ ಯೋಜನೆಯ ಅಧ್ಯಕ್ಷ ವೀರೇಂದ್ರ ಹೆಗ್ಗಡೆ ಅವರ ಕನಸಿನ ಕೂಸು ಈ ಯೋಜನೆ ಆಗಿದೆ. ನಿರ್ಗತಿಕರ ಮಾಶಾಸನ, ಸುಜ್ಞಾನ ನಿಧಿ, ಶಿಷ್ಯ ವೇತನ, ಕೃಷಿ , ಹೈನುಗಾರಿಕಾ ಅಂತಹ ಯೋಜನೆಗಳು ಜಾರಿಯಲ್ಲಿವೆ. ಪ್ರಗತಿ ನಿಧಿ ಸದ್ಬಳಕೆಯಿಂದ ಕುಟುಂಬ ಅಭಿವೃದ್ಧಿ, ಸ್ವ ಉದ್ಯೋಗಗಳ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕು ಈ ನಿಟ್ಟಿನಲ್ಲಿ ಯೋಜನೆ ಕೆಲಸ ಮಾಡುತ್ತಿದ್ದು, ನೂತನ ಸ್ವ ಸಹಾಯ ಸಂಘಗಳ ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.</p>.<p>ಆತ್ಕೂರು ಗ್ರಾಮದಲ್ಲಿ 10 ಜನ (ಅಂಗವಿಕಲರು) ಅಂಗವಿಕಲರಿಗೆ ಧರ್ಮಸ್ಥಳ ಯೋಜನೆಯ ವತಿಯಿಂದ 3 ವ್ಹೀಲ್ ಚೇರ್, 4 ಸಿಂಗಲ್ ವೇಗ್ ವಾಕಿಂಗ್ ಸ್ಟಿಕ್ ಮತ್ತು 3 ಲೇಗ್ ವಾಕಿಂಗ್ ಸ್ಟಿಕ್ಗಳನ್ನು ವಿತರಿಸಿದರು.</p>.<p>ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿ ರಘುಪತಿ ಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ತ್ರಿವೇಣಿ, ಮೇಲ್ವಿಚಾರಕ ಅಡಿವೆಯ್ಯ ಮಾಲಗಿತ್ತಿಮಠ, ಸೇವಾ ಪ್ರತಿನಿಧಿ ನರೇಶ, ಈರೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸರ್ಜಾಪುರ (ಶಕ್ತಿನಗರ):</strong> ‘ಮಹಿಳೆಯರು ಆರ್ಥಿಕ ಅಭಿವೃದ್ಧಿ ಸಾಧಿಸಿದಾಗಲೇ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ’ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಸಂತೋಷ್ ಕುಮಾರ ಹೇಳಿದರು.</p>.<p>ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸರ್ಜಾಪೂರ ಗ್ರಾಮದಲ್ಲಿ 16 ನೂತನ ಸ್ವ ಸಹಾಯ ಸಂಘಗಳ ಉದ್ಘಾಟನೆ ಸಮಾರಂಭ ಮತ್ತು ದಾಖಲಾತಿಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಧರ್ಮಸ್ಥಳ ಕ್ಷೇತದ್ರ ಧರ್ಮಾಧಿಕಾರಿ ಹಾಗೂ ಯೋಜನೆಯ ಅಧ್ಯಕ್ಷ ವೀರೇಂದ್ರ ಹೆಗ್ಗಡೆ ಅವರ ಕನಸಿನ ಕೂಸು ಈ ಯೋಜನೆ ಆಗಿದೆ. ನಿರ್ಗತಿಕರ ಮಾಶಾಸನ, ಸುಜ್ಞಾನ ನಿಧಿ, ಶಿಷ್ಯ ವೇತನ, ಕೃಷಿ , ಹೈನುಗಾರಿಕಾ ಅಂತಹ ಯೋಜನೆಗಳು ಜಾರಿಯಲ್ಲಿವೆ. ಪ್ರಗತಿ ನಿಧಿ ಸದ್ಬಳಕೆಯಿಂದ ಕುಟುಂಬ ಅಭಿವೃದ್ಧಿ, ಸ್ವ ಉದ್ಯೋಗಗಳ ಮೂಲಕ ಮಹಿಳೆಯರ ಸ್ವಾವಲಂಬಿ ಬದುಕು ಈ ನಿಟ್ಟಿನಲ್ಲಿ ಯೋಜನೆ ಕೆಲಸ ಮಾಡುತ್ತಿದ್ದು, ನೂತನ ಸ್ವ ಸಹಾಯ ಸಂಘಗಳ ಸದಸ್ಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.</p>.<p>ಆತ್ಕೂರು ಗ್ರಾಮದಲ್ಲಿ 10 ಜನ (ಅಂಗವಿಕಲರು) ಅಂಗವಿಕಲರಿಗೆ ಧರ್ಮಸ್ಥಳ ಯೋಜನೆಯ ವತಿಯಿಂದ 3 ವ್ಹೀಲ್ ಚೇರ್, 4 ಸಿಂಗಲ್ ವೇಗ್ ವಾಕಿಂಗ್ ಸ್ಟಿಕ್ ಮತ್ತು 3 ಲೇಗ್ ವಾಕಿಂಗ್ ಸ್ಟಿಕ್ಗಳನ್ನು ವಿತರಿಸಿದರು.</p>.<p>ವೇದಿಕೆಯಲ್ಲಿ ತಾಲೂಕಿನ ಯೋಜನಾಧಿಕಾರಿ ರಘುಪತಿ ಗೌಡ, ಗ್ರಾಮ ಪಂಚಾಯಿತಿ ಸದಸ್ಯೆ ತ್ರಿವೇಣಿ, ಮೇಲ್ವಿಚಾರಕ ಅಡಿವೆಯ್ಯ ಮಾಲಗಿತ್ತಿಮಠ, ಸೇವಾ ಪ್ರತಿನಿಧಿ ನರೇಶ, ಈರೇಶ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>