<p><strong>ರಾಯಚೂರು</strong>: ಒಳ ಮೀಸಲಾತಿ ಜಾರಿಯಾಗುವವರೆಗೆ ಹಳೆಯ ಪದ್ದತಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಛಲುವಾದಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ನೀತಿಶ್ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ರಾಜ್ಯದಲ್ಲಿ ಒಳಮೀಸಲಾತಿ ಜಾರಿ ನಂತರ ಉಂಟಾದ ಆಡಳಿತಾತ್ಮಕ ಗೊಂದಲಗಳು, ನ್ಯಾಯಾಲಯದ ಅಡೆತಡೆಗಳು ಹಾಗೂ ರೋಸ್ಟರ್ ಬಿಂದುಗಳ ವೈಜ್ಞಾನಿಕತೆಯ ಕೊರತೆಯಿಂದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪರಿಶಿಷ್ಟ ಜಾತಿಯ ಪ್ರವರ್ಗ ಎ, ಬಿ, ಸಿಗಳಿಗೆ 6+6+5 ಪ್ರಮಾಣದ ಸಮನ್ವಯ ಹಂಚಿಕೆ ಆಗುವಂತೆ ನೇಮಕಾತಿ ಪ್ರಾಧಿಕಾರಗಳನ್ನು ಒಟ್ಟು ಘಟಕವಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸಬೇಕು. ವಿಶೇಷವಾಗಿ 1 ಅಥವಾ 2 ಹುದ್ದೆಗಳಿರುವಲ್ಲಿ ಮೀಸಲಾತಿ ಸಮತೋಲನ ಕಾಪಾಡಲು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಮೀಸಲಾತಿ ಘಟಕ ರಚಿಸಬೇಕು ಎಂದು ಒತ್ತಾಯಿಸಿದರು.</p>.<p>ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರವೀಂದ್ರ ಪಟ್ಟಿ, ಶಿವರಾಜ ಜಾನೇಕಲ್, ಕೆ. ಯಲ್ಲಪ್ಪ ಬೊಮ್ಮನಾಳ, ಈರಣ್ಣ, ವೀರೇಶ ಹಂಚಿನಾಳ, ಮರಿಲಿಂಗಪ್ಪ ಅರಿಕೇರಾ, ಬಿ,.ಶ್ರೀನಿವಾಸ, ನರಸಿಂಹಲು ನೆಲಹಾಳ, ಮಹೇಶ, ರಮೇಶ, ಕಿರಣ್, ಮೂಕಪ್ಪ, ಭಾಸ್ಕರ, ದುರ್ಗಪ್ಪ, ಹನುಮಂತ, ರಾಮಣ್ಣ, ಕುಬೇರಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ಒಳ ಮೀಸಲಾತಿ ಜಾರಿಯಾಗುವವರೆಗೆ ಹಳೆಯ ಪದ್ದತಿ ಮುಂದುವರಿಸಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಛಲುವಾದಿ ಮಹಾಸಭಾದ ಜಿಲ್ಲಾ ಘಟಕದ ಪದಾಧಿಕಾರಿಗಳು ಗುರುವಾರ ಜಿಲ್ಲಾಧಿಕಾರಿ ನೀತಿಶ್ ಕೆ. ಅವರಿಗೆ ಮನವಿ ಪತ್ರ ಸಲ್ಲಿಸಿದರು.</p>.<p>ರಾಜ್ಯದಲ್ಲಿ ಒಳಮೀಸಲಾತಿ ಜಾರಿ ನಂತರ ಉಂಟಾದ ಆಡಳಿತಾತ್ಮಕ ಗೊಂದಲಗಳು, ನ್ಯಾಯಾಲಯದ ಅಡೆತಡೆಗಳು ಹಾಗೂ ರೋಸ್ಟರ್ ಬಿಂದುಗಳ ವೈಜ್ಞಾನಿಕತೆಯ ಕೊರತೆಯಿಂದ ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.</p>.<p>ಪರಿಶಿಷ್ಟ ಜಾತಿಯ ಪ್ರವರ್ಗ ಎ, ಬಿ, ಸಿಗಳಿಗೆ 6+6+5 ಪ್ರಮಾಣದ ಸಮನ್ವಯ ಹಂಚಿಕೆ ಆಗುವಂತೆ ನೇಮಕಾತಿ ಪ್ರಾಧಿಕಾರಗಳನ್ನು ಒಟ್ಟು ಘಟಕವಾಗಿ ಪರಿಗಣಿಸಿ ಅಧಿಸೂಚನೆ ಹೊರಡಿಸಬೇಕು. ವಿಶೇಷವಾಗಿ 1 ಅಥವಾ 2 ಹುದ್ದೆಗಳಿರುವಲ್ಲಿ ಮೀಸಲಾತಿ ಸಮತೋಲನ ಕಾಪಾಡಲು ಸಮಾಜ ಕಲ್ಯಾಣ ಇಲಾಖೆಯ ಅಧೀನದಲ್ಲಿ ಪ್ರತ್ಯೇಕ ಮೀಸಲಾತಿ ಘಟಕ ರಚಿಸಬೇಕು ಎಂದು ಒತ್ತಾಯಿಸಿದರು.</p>.<p>ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ರವೀಂದ್ರ ಪಟ್ಟಿ, ಶಿವರಾಜ ಜಾನೇಕಲ್, ಕೆ. ಯಲ್ಲಪ್ಪ ಬೊಮ್ಮನಾಳ, ಈರಣ್ಣ, ವೀರೇಶ ಹಂಚಿನಾಳ, ಮರಿಲಿಂಗಪ್ಪ ಅರಿಕೇರಾ, ಬಿ,.ಶ್ರೀನಿವಾಸ, ನರಸಿಂಹಲು ನೆಲಹಾಳ, ಮಹೇಶ, ರಮೇಶ, ಕಿರಣ್, ಮೂಕಪ್ಪ, ಭಾಸ್ಕರ, ದುರ್ಗಪ್ಪ, ಹನುಮಂತ, ರಾಮಣ್ಣ, ಕುಬೇರಪ್ಪ ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>