ಪಿಎಸ್ಐ ಪ್ರಕಾಶರೆಡ್ಡಿ ಡಂಬಳ, ಕಲ್ಯಾಣ ಕರ್ನಾಟಕ ಕಲಾವಿದರ ಸಂಘ ರಾಜ್ಯ ಘಟಕ ಅಧ್ಯಕ್ಷ ಪ್ರಕಾಶ ಅಂಗಡಿ ಮಾತನಾಡಿ, ‘ಕಲೆ, ಸಾಹಿತ್ಯ ಯಾರ ಸ್ವತ್ತು ಅಲ್ಲ. ನಿರಂತರ ಅಧ್ಯಯನದಿಂದ ಸಮಾಜದಲ್ಲಿನ ವಿವಿಧ ಬಗೆಯ ಕಲೆ ಸಂಸ್ಕೃತಿ, ಸಾಹಿತ್ಯದ ಅಭಿವೃದ್ಧಿಗೆ ತಾವುಗಳು ಶ್ರಮಿಸಬೇಕು. ಸರ್ಕಾರ ಈ ಭಾಗದ ಕಲಾವಿದರ ಪ್ರೋತ್ಸಾಹಿಸಲು ಮುಂದಾಗಬೇಕು’ ಎಂದರು.