ನಂಬಿಕೆಯ ಪ್ರಕಾರ,ಕೊರವಂಜಿ ನಿತ್ಯವೂ ವ್ಯಾಪಾರಕ್ಕಾಗಿ ವಿವಿಧ ಊರುಗಳನ್ನು ಸುತ್ತಾಡಿ ವ್ಯಾಪಾರ ಮುಗಿಸಿಕೊಂಡು ತನ್ನ ಮಗುವಿನೊಂದಿಗೆ, ದಾರಿಯಲ್ಲಿ ನಡೆದುಕೊಂಡು ಬರುವಾಗ ತೀವ್ರ ಬಾಯಾರಿಕೆಯಾಗುತ್ತದೆ. ದಾರಿಯ ಪಕ್ಕದ ಹೊಲದಲ್ಲಿ ಗೋಧಿರಾಶಿ ಮಾಡುವವರಿದ್ದು, ಅವರ ಹತ್ತಿರ ನೀರು ಸಿಗಬಹುದೆಂಬ ಬಯಕೆಯಿಂದ ತನ್ನ ಮಗುವಿನೊಂದಿಗೆ ರಾಶಿ ಮಾಡುವವರ ಹತ್ತಿರ ಹೋಗಿ ನೀರು ಬೇಡಿದಳು.