ಶಿಕ್ಷಣ ಪಡೆದು ಸಂಸ್ಕಾರ ಪಡೆದುಕೊಳ್ಳಬೇಕು. ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ತುಂಬಬೇಕು. ಆ ನಿಟ್ಟಿನಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಗಬೇಕಾಗಿದೆ. ದೇಶದಲ್ಲಿ ಶಿಕ್ಷಣ ಪಡೆದು ವಿದ್ಯಾವಂತರಾದವರು ಇದ್ದರೆ, ವಿದ್ಯಾವಂತರೆಲ್ಲ ವಿವೇಕಿಗಳಲ್ಲ. ಅವಿದ್ಯಾವಂತರೆಲ್ಲ ಅವಿವೇಕಿಗಳಲ್ಲ. ವಿವೇಕಕ್ಕೂ ವಿದೈಗೂ ಸಂಬಂಧ ಇಲ್ಲ, ವಿದ್ಯೆಯಿಂದ ವಿವೇಕ ಬರಬೇಕಾಗಿದೆ ಎಂದು ಹೇಳಿದರು.