ಸೈದಾಪುರ, ಗುಡದಿನ್ನಿ, ಕೆ.ತಿಮ್ಮಾಪುರ, ತೊಪ್ಪಲದೊಡ್ಡಿ, ಚಿಂಚಿರಿಕಿ, ಪಾತಾಪುರ, ಹಣಿಗಿ ಸುತ್ತಮುತ್ತ ಉತ್ತಮ ಮಳೆಯಾಗಿದೆ. ಮೊದಲ ಮಳೆಗೆ ಬಿತ್ತನೆ ಮಾಡಿದ ರೈತರು ಬಿತ್ತನೆ ನಂತರ ಮಳೆಯಾಗಿದ್ದರಿಂದ ಸಂತಸ ವ್ಯಕ್ತಪಡಿಸಿದ್ದಾರೆ. ಭೂಮಿ ಹದವಾಗಿದ್ದು, ಸ್ವಲ್ಪ ತೇವಾಂಶ ಕಡಿಮೆಯಾದ ನಂತರ ಬಿತ್ತನೆ ಮುಂದುವರಿಸಬಹುದು ಎಂದು ರೈತ ಮೌನೇಶ ಹೇಳಿದರು.