<p><strong>ರಾಯಚೂರು:</strong> ತಾಲ್ಲೂಕಿನ ಮಲಿಯಾಬಾದ್ ಸಮೀಪ ರಾಯಚೂರು–ಮಂತ್ರಾಲಯ ರಸ್ತೆಯ ಬದಿಯಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನ ಆವರಣ ಗೋಡೆಯನ್ನು ಭೂವಿವಾದದ ಕಾರಣ ಜೆಸಿಬಿಯಿಂದ ಕೆಡವಲಾಗಿದೆ.</p>.<p>13 ವರ್ಷಗಳ ಹಿಂದೆ ದಾನಿಯೊಬ್ಬರು ಕೆಎಸ್ಸಿಎ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 12 ಎಕರೆ ಜಾಗವನ್ನು ಮುಕ್ತವಾಗಿ ಕೊಟಿದ್ದಾರೆ. 12 ಎಕರೆಯಲ್ಲಿ 1.29 ಎಕರೆ ಕಡಿಮೆ ಬಂದ ಕಾರಣ ಹಾಗೂ ಭೂವಿಸ್ತೀರ್ಣದ ವಿವಾದ ಹಿನ್ನೆಯೆಲ್ಲಿ ಕೆಎಸ್ಸಿಯ ಆಡಳಿತ ಮಂಡಳಿಯವರು ಸರ್ವೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.</p>.<p>ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಭೂಮಾಪನ ಮಾಡಿದ ನಂತರ 1.29 ಎಕರೆ ಕೆಎಸ್ಸಿಎ ಸೇರಿದ್ದು, ಎಂದು ಸ್ಪಷ್ಟ ಅಭಿಪ್ರಾಯ ಹೇಳಿದ್ದರು ಹೀಗಾಗಿ. ಕೆಎಸ್ಸಿಯ ಸ್ಥಳೀಯ ಆಡಳಿತ ಮಂಡಳಿಯವರು ನವೆಂಬರ್ 3 ರಂದು ಆವರಣ ಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು.</p>.<p>ಮೂಲ ಭೂಮಾಲೀಕರು ಎನ್ನಲಾದ ವಿಜಯಕುಮಾರ ಅವರು ನ.3ರಂದು ಸ್ಥಳಕ್ಕೆ ಬಂದು ಆವರಣ ಗೋಡೆ ನಿರ್ಮಾಣಕ್ಕೆ ಆಕ್ಷೇಪ ವ್ಯ್ಕತಪಡಿಸಿದ್ದರು. ನವೆಂಬರ್ 4ರಂದು ಬಂದು ಅಕ್ರಮವಾಗಿ ಮೈದಾನಪ್ರವೇಶ ಮಾಡಿ ₹ 4 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ 130 ಮೀಟರ್ ಉದ್ದದ ಆವರಣ ಗೋಡೆ ಕೆಡವಿ ಹಾಕಿದ್ದಾರೆ ಎಂದು ವಿಜಯಕುಮಾರ ವಿರುದ್ಧ ಭೀಮಾಚಾರ್ಯ ಜಗನ್ನಾಥಾಚಾರ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>
<p><strong>ರಾಯಚೂರು:</strong> ತಾಲ್ಲೂಕಿನ ಮಲಿಯಾಬಾದ್ ಸಮೀಪ ರಾಯಚೂರು–ಮಂತ್ರಾಲಯ ರಸ್ತೆಯ ಬದಿಯಲ್ಲಿರುವ ಕೆಎಸ್ಸಿಎ ಕ್ರಿಕೆಟ್ ಮೈದಾನ ಆವರಣ ಗೋಡೆಯನ್ನು ಭೂವಿವಾದದ ಕಾರಣ ಜೆಸಿಬಿಯಿಂದ ಕೆಡವಲಾಗಿದೆ.</p>.<p>13 ವರ್ಷಗಳ ಹಿಂದೆ ದಾನಿಯೊಬ್ಬರು ಕೆಎಸ್ಸಿಎ ಕ್ರಿಕೆಟ್ ಮೈದಾನ ನಿರ್ಮಾಣಕ್ಕೆ 12 ಎಕರೆ ಜಾಗವನ್ನು ಮುಕ್ತವಾಗಿ ಕೊಟಿದ್ದಾರೆ. 12 ಎಕರೆಯಲ್ಲಿ 1.29 ಎಕರೆ ಕಡಿಮೆ ಬಂದ ಕಾರಣ ಹಾಗೂ ಭೂವಿಸ್ತೀರ್ಣದ ವಿವಾದ ಹಿನ್ನೆಯೆಲ್ಲಿ ಕೆಎಸ್ಸಿಯ ಆಡಳಿತ ಮಂಡಳಿಯವರು ಸರ್ವೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದರು.</p>.<p>ಸರ್ವೆ ಅಧಿಕಾರಿಗಳು ಸ್ಥಳಕ್ಕೆ ಬಂದು ಭೂಮಾಪನ ಮಾಡಿದ ನಂತರ 1.29 ಎಕರೆ ಕೆಎಸ್ಸಿಎ ಸೇರಿದ್ದು, ಎಂದು ಸ್ಪಷ್ಟ ಅಭಿಪ್ರಾಯ ಹೇಳಿದ್ದರು ಹೀಗಾಗಿ. ಕೆಎಸ್ಸಿಯ ಸ್ಥಳೀಯ ಆಡಳಿತ ಮಂಡಳಿಯವರು ನವೆಂಬರ್ 3 ರಂದು ಆವರಣ ಗೋಡೆ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು.</p>.<p>ಮೂಲ ಭೂಮಾಲೀಕರು ಎನ್ನಲಾದ ವಿಜಯಕುಮಾರ ಅವರು ನ.3ರಂದು ಸ್ಥಳಕ್ಕೆ ಬಂದು ಆವರಣ ಗೋಡೆ ನಿರ್ಮಾಣಕ್ಕೆ ಆಕ್ಷೇಪ ವ್ಯ್ಕತಪಡಿಸಿದ್ದರು. ನವೆಂಬರ್ 4ರಂದು ಬಂದು ಅಕ್ರಮವಾಗಿ ಮೈದಾನಪ್ರವೇಶ ಮಾಡಿ ₹ 4 ಲಕ್ಷ ಖರ್ಚು ಮಾಡಿ ನಿರ್ಮಿಸಿದ್ದ 130 ಮೀಟರ್ ಉದ್ದದ ಆವರಣ ಗೋಡೆ ಕೆಡವಿ ಹಾಕಿದ್ದಾರೆ ಎಂದು ವಿಜಯಕುಮಾರ ವಿರುದ್ಧ ಭೀಮಾಚಾರ್ಯ ಜಗನ್ನಾಥಾಚಾರ್ಯ ಯರಗೇರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.</p>