ರಥಾಂಗ ಹೋಮ, ತೇರಿಗೆ ಪೂಜೆ ನೆರವೇರಿಸಿದ ವಿಪ್ರ ಸಮಾಜದ ಮುಖಂಡರು ರಥೋತ್ಸವ ಸಿದ್ಧತೆಗೆ ನಾಂದಿ ಹಾಡಿದರು. ದೇವಸ್ಥಾನ ಸಮಿತಿ, ಸಂಘ ಸಂಸ್ಥೆಗಳು, ವಾಹನ ನಿರ್ವಾಹಕರು, ಚಾಲಕರು ವೈವಿಧ್ಯಮಯ ಹೂಗಳು ಹಾಗೂ ತಳಿರು ತೋರಣಗಳಿಂದ ರಥಕ್ಕೆ ಅಲಂಕಾರ ಮಾಡಿದರು. ಉತ್ಸವ ಮೂರ್ತಿಯನ್ನು ಭಾಜಾ ಭಜಂತ್ರಿ, ಮೆರವಣಿಗೆ ಸಮೇತ ಕರೆತಂದು ರಥದಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಭಕ್ತರು ಜಯಘೋಷ ಹಾಕುತ್ತ ರಥವನ್ನು ಎಳೆದರು. ಭಕ್ತರು ಮಂಡಕ್ಕಿ, ಉತ್ತತ್ತಿ, ಬಾಳೆಹಣ್ಣು ಎಸೆದು ಭಕ್ತಿ ಸಮರ್ಪಿಸಿದರು.