<p><strong>ಮಾನ್ವಿ:</strong> ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆ ಅಡಿಯಲ್ಲಿ ಸರ್ಕಾರ ಕಂದಾಯ ಇಲಾಖೆಯ ನಾಡ ಕಚೇರಿಗಳ ಮೂಲಕ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುತ್ತಿದೆ.</p>.<p>ತಾಲ್ಲೂಕಿನ ಮೂರು ನಾಡ ಕಚೇರಿಗಳು ಜೂನ್, ಜುಲೈ ಸೇರಿದಂತೆ ಆಗಸ್ಟ್ ತಿಂಗಳಲ್ಲಿ ಇದುವರೆಗೂ ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿವೆ.</p>.<p>ಇದುವರೆಗೂ ಈ ಕಚೇರಿಗಳಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿಂಚಣಿ ಸೇರಿದಂತೆ ಸಕಾಲ ಯೋಜನೆ ಅಡಿ 43 ಸೇವೆಗಳ ಒಟ್ಟು 2,614 ಅರ್ಜಿ ವಿಲೇವಾರಿ ಮಾಡಲಾಗಿದೆ.</p>.<p>ಅರ್ಜಿಗಳ ವಿಲೇವಾರಿ ಸೂಚ್ಯಂಕದ ಪ್ರಕಾರ ಈ ನಾಡ ಕಚೇರಿಗಳ ಸಾಧನೆ ಗುರುತಿಸಲಾಗಿದೆ.</p>.<p>ಕುರ್ಡಿ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-15.2) ರಾಜ್ಯಮಟ್ಟದಲ್ಲಿ ಪ್ರಥಮ, ಹಿರೇಕೊಟ್ನೆಕಲ್ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-13.2) 6ನೇ ಸ್ಥಾನ ಹಾಗೂ ಮಾನ್ವಿ ಪಟ್ಟಣದ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-11.44) 13ನೇ ಸ್ಥಾನ ಪಡೆದಿದೆ.</p>.<p>ಅರ್ಜಿಗಳ ವಿಲೇವಾರಿ ಕುರಿತು ಪ್ರತಿ ದಿನ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡುತ್ತಿರುವ ಕಾರಣ ಈ ಸಾಧನೆ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ರಾಜ್ಯಮಟ್ಟದಲ್ಲಿ ಗುರುತಿಸುವಂಥ ಸಾಧನೆ ಮಾಡಿದ್ದಕ್ಕಾಗಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಅವರಿಗೆ ಅಭಿನಂದನಾ ಪತ್ರ ನೀಡಿದ್ದಾರೆ.</p>.<p>8 ಲಕ್ಷ ಪುಟಗಳ ಡಿಜಿಟಲೀಕರಣ: ಭೂ ಸುರಕ್ಷಾ ಯೋಜನೆ ಜಾರಿಯಾದ ಆರು ತಿಂಗಳಲ್ಲಿ ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿನ ರೈತರ ಜಮೀನಿನ ದಾಖಲೆಗಳಿಗೆ ಸಂಬಂಧಿಸಿದ 30, 130 ಫೈಲ್ಗಳು ಹಾಗೂ 2 ಸಾವಿರ ರಿಜಿಸ್ಟರ್ ಪುಸ್ತಕಗಳ 8,09,662 ಪುಟಗಳನ್ನು ಡಿಜಿಟಲೀಕರಣ ಮಾಡಲಾಗಿದೆ.</p>.<p>ನಾಡ ಕಚೇರಿಗಳಲ್ಲಿನ ತ್ವರಿತಗತಿಯ ಸೇವೆ ಹಾಗೂ ಸಾಧನೆ ಬಗ್ಗೆ ಸ್ಥಳೀಯ ಸಂಘ–ಸಂಸ್ಥೆಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><blockquote>ನಾಡ ಕಚೇರಿಗಳಲ್ಲಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆ ಸಹಕಾರದಿಂದ ಉತ್ತಮ ಸಾಧನೆ ಸಾಧ್ಯವಾಗಿದೆ</blockquote><span class="attribution">ಭೀಮರಾಯ ರಾಮಸಮುದ್ರ ತಹಶೀಲ್ದಾರ್ ಮಾನ್ವಿ</span></div>.<div><blockquote>ಕಂದಾಯ ಇಲಾಖೆಯ ಅಧಿಕಾರಿಗಳ ತ್ವರಿತಗತಿಯ ಸ್ಪಂದನೆ ಶ್ಲಾಘನೀಯ. ಇತರ ಇಲಾಖೆಗಳಿಗೂ ಮಾದರಿ</blockquote><span class="attribution"> ಎಚ್.ಶರ್ಪುದ್ದೀನ್ ಪೋತ್ನಾಳ ಅಧ್ಯಕ್ಷ ಸಿಐಟಿಯು ಸಂಘಟನೆ</span></div>.<p><strong>ಇ- ಪೌತಿ ಆಂದೋಲನ</strong></p><p> ತಾಲ್ಲೂಕಿನಲ್ಲಿ ಇದುವರೆಗೆ ತೀರಿಕೊಂಡಿರುವ 10573 ಭೂ ಮಾಲೀಕರ ಖಾತೆಗಳು ಅವರ ವಾರಸುದಾರರ ಹೆಸರಿನಲ್ಲಿ ಇನ್ನೂ ಬದಲಾವಣೆಯಾಗಿಲ್ಲ. ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಅರ್ಧದಷ್ಟು ಅಥವಾ ಸುಮಾರು 3 ಸಾವಿರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಿ ಪಿಎಂ- ಕಿಸಾನ್ ಯೋಜನೆ ಸೇರಿ ಮತ್ತಿತರ ಸರ್ಕಾರದ ಸವಲತ್ತುಗಳನ್ನು ಪಡೆಯುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಾನ್ವಿ:</strong> ಅಟಲ್ಜೀ ಜನಸ್ನೇಹಿ ಕೇಂದ್ರ ಯೋಜನೆ ಅಡಿಯಲ್ಲಿ ಸರ್ಕಾರ ಕಂದಾಯ ಇಲಾಖೆಯ ನಾಡ ಕಚೇರಿಗಳ ಮೂಲಕ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುತ್ತಿದೆ.</p>.<p>ತಾಲ್ಲೂಕಿನ ಮೂರು ನಾಡ ಕಚೇರಿಗಳು ಜೂನ್, ಜುಲೈ ಸೇರಿದಂತೆ ಆಗಸ್ಟ್ ತಿಂಗಳಲ್ಲಿ ಇದುವರೆಗೂ ಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡುವ ಮೂಲಕ ರಾಜ್ಯಮಟ್ಟದಲ್ಲಿ ಗಮನಾರ್ಹ ಸಾಧನೆ ಮಾಡಿವೆ.</p>.<p>ಇದುವರೆಗೂ ಈ ಕಚೇರಿಗಳಿಂದ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಪಿಂಚಣಿ ಸೇರಿದಂತೆ ಸಕಾಲ ಯೋಜನೆ ಅಡಿ 43 ಸೇವೆಗಳ ಒಟ್ಟು 2,614 ಅರ್ಜಿ ವಿಲೇವಾರಿ ಮಾಡಲಾಗಿದೆ.</p>.<p>ಅರ್ಜಿಗಳ ವಿಲೇವಾರಿ ಸೂಚ್ಯಂಕದ ಪ್ರಕಾರ ಈ ನಾಡ ಕಚೇರಿಗಳ ಸಾಧನೆ ಗುರುತಿಸಲಾಗಿದೆ.</p>.<p>ಕುರ್ಡಿ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-15.2) ರಾಜ್ಯಮಟ್ಟದಲ್ಲಿ ಪ್ರಥಮ, ಹಿರೇಕೊಟ್ನೆಕಲ್ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-13.2) 6ನೇ ಸ್ಥಾನ ಹಾಗೂ ಮಾನ್ವಿ ಪಟ್ಟಣದ ನಾಡ ಕಚೇರಿ (ವಿಲೇವಾರಿ ಸೂಚ್ಯಂಕ-11.44) 13ನೇ ಸ್ಥಾನ ಪಡೆದಿದೆ.</p>.<p>ಅರ್ಜಿಗಳ ವಿಲೇವಾರಿ ಕುರಿತು ಪ್ರತಿ ದಿನ ತಹಶೀಲ್ದಾರ್, ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮನ್ವಯದಿಂದ ಕೆಲಸ ಮಾಡುತ್ತಿರುವ ಕಾರಣ ಈ ಸಾಧನೆ ಸಾಧ್ಯವಾಗಿದೆ ಎಂದು ಮೂಲಗಳು ತಿಳಿಸಿವೆ.</p>.<p>ರಾಜ್ಯಮಟ್ಟದಲ್ಲಿ ಗುರುತಿಸುವಂಥ ಸಾಧನೆ ಮಾಡಿದ್ದಕ್ಕಾಗಿ ಜಿಲ್ಲಾಧಿಕಾರಿ ನಿತೀಶ್ ಕೆ. ಅವರು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಅವರಿಗೆ ಅಭಿನಂದನಾ ಪತ್ರ ನೀಡಿದ್ದಾರೆ.</p>.<p>8 ಲಕ್ಷ ಪುಟಗಳ ಡಿಜಿಟಲೀಕರಣ: ಭೂ ಸುರಕ್ಷಾ ಯೋಜನೆ ಜಾರಿಯಾದ ಆರು ತಿಂಗಳಲ್ಲಿ ಸ್ಥಳೀಯ ತಹಶೀಲ್ದಾರ್ ಕಚೇರಿಯಲ್ಲಿನ ರೈತರ ಜಮೀನಿನ ದಾಖಲೆಗಳಿಗೆ ಸಂಬಂಧಿಸಿದ 30, 130 ಫೈಲ್ಗಳು ಹಾಗೂ 2 ಸಾವಿರ ರಿಜಿಸ್ಟರ್ ಪುಸ್ತಕಗಳ 8,09,662 ಪುಟಗಳನ್ನು ಡಿಜಿಟಲೀಕರಣ ಮಾಡಲಾಗಿದೆ.</p>.<p>ನಾಡ ಕಚೇರಿಗಳಲ್ಲಿನ ತ್ವರಿತಗತಿಯ ಸೇವೆ ಹಾಗೂ ಸಾಧನೆ ಬಗ್ಗೆ ಸ್ಥಳೀಯ ಸಂಘ–ಸಂಸ್ಥೆಗಳ ಮುಖಂಡರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.</p>.<div><blockquote>ನಾಡ ಕಚೇರಿಗಳಲ್ಲಿನ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಕಾರ್ಯಕ್ಷಮತೆ ಸಹಕಾರದಿಂದ ಉತ್ತಮ ಸಾಧನೆ ಸಾಧ್ಯವಾಗಿದೆ</blockquote><span class="attribution">ಭೀಮರಾಯ ರಾಮಸಮುದ್ರ ತಹಶೀಲ್ದಾರ್ ಮಾನ್ವಿ</span></div>.<div><blockquote>ಕಂದಾಯ ಇಲಾಖೆಯ ಅಧಿಕಾರಿಗಳ ತ್ವರಿತಗತಿಯ ಸ್ಪಂದನೆ ಶ್ಲಾಘನೀಯ. ಇತರ ಇಲಾಖೆಗಳಿಗೂ ಮಾದರಿ</blockquote><span class="attribution"> ಎಚ್.ಶರ್ಪುದ್ದೀನ್ ಪೋತ್ನಾಳ ಅಧ್ಯಕ್ಷ ಸಿಐಟಿಯು ಸಂಘಟನೆ</span></div>.<p><strong>ಇ- ಪೌತಿ ಆಂದೋಲನ</strong></p><p> ತಾಲ್ಲೂಕಿನಲ್ಲಿ ಇದುವರೆಗೆ ತೀರಿಕೊಂಡಿರುವ 10573 ಭೂ ಮಾಲೀಕರ ಖಾತೆಗಳು ಅವರ ವಾರಸುದಾರರ ಹೆಸರಿನಲ್ಲಿ ಇನ್ನೂ ಬದಲಾವಣೆಯಾಗಿಲ್ಲ. ಆಗಸ್ಟ್ ತಿಂಗಳ ಅಂತ್ಯದ ವೇಳೆಗೆ ಅರ್ಧದಷ್ಟು ಅಥವಾ ಸುಮಾರು 3 ಸಾವಿರ ವಾರಸುದಾರರ ಹೆಸರಿಗೆ ಖಾತೆ ಬದಲಾವಣೆ ಮಾಡಿ ಪಿಎಂ- ಕಿಸಾನ್ ಯೋಜನೆ ಸೇರಿ ಮತ್ತಿತರ ಸರ್ಕಾರದ ಸವಲತ್ತುಗಳನ್ನು ಪಡೆಯುವಂತೆ ಮಾಡುವ ಗುರಿ ಹೊಂದಲಾಗಿದೆ ಎಂದು ತಹಶೀಲ್ದಾರ್ ಭೀಮರಾಯ ರಾಮಸಮುದ್ರ ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>