<p><strong>ಕವಿತಾಳ:</strong> ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮೀಪದ ವಟಗಲ್ ಗ್ರಾಮ ಪಂಚಾಯಿತಿ ಎದುರು ವಿಬಿ ಜಿ ರಾಮ್ ಜಿ ಕೂಲಿಕಾರರು ಗುರುವಾರ ಪ್ರತಿಭಟನೆ ನಡೆಸಿದರು.</p>.<p>‘ಸ.ನಂ 170ರಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು 14 ದಿನ ನಿರ್ವಹಿಸಿದ ಕೂಲಿಕಾರರಿಗೆ ನಿತ್ಯ ಕೇವಲ ₹60ರಂತೆ ಕೂಲಿ ಪಾವತಿ ಮಾಡಲಾಗಿದೆ. ಅಧಿಕಾರಿಗಳು ಯಂತ್ರ ಬಳಸಿ ಅಧಿಕ ಕಾಮಗಾರಿ ನಿರ್ವಹಿಸಿ ವಂಚಿಸುತ್ತಿದ್ದಾರೆ. ಕೂಲಿ ಪಾವತಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ’ ಎಂದು ಕೂಲಿಕಾರರು ಆರೋಪಿಸಿದರು.</p>.<p>‘ನಿತ್ಯ ₹370 ಕೂಲಿ ಪಾವತಿಸಬೇಕು, ಕಾಮಗಾರಿ ಸ್ಥಳದಲ್ಲಿ ಶಾಮಿಯಾನ ಹಾಕಿ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಕಾಮಗಾರಿ ಸ್ಥಳಕ್ಕೆ ಹೋಗಿ ಬರಲು ಆಟೊ ಒದಗಿಸಬೇಕು’ ಎಂದು ಕಾರ್ಮಿಕ ಸುಭಾಶ್ಚಂದ್ರ ಕಡಬೂರು ಆಗ್ರಹಿಸಿದರು.</p>.<p>‘ಬೇಸಿಗೆ ಆರಂಭವಾಗುತ್ತಿದ್ದು ನೆರಳು ಮತ್ತು ಕುಡಿಯುವ ನೀರಿನ ಕೊರತೆಯಿಂದ ಸಮಸ್ಯೆಯಾಗುತ್ತಿದೆ, ಒಂದು ತಿಂಗಳಿಂದ ಕುಡಿಯುವ ನೀರು ಒದಗಿಸಿಲ್ಲ, ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಲಕ್ಷ್ಮೀ ದೂರಿದರು.</p>.<p>ಸ್ಥಳಕ್ಕೆ ಆಗಮಿಸಿದ ಮಸ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಶಿವಾನಂದರೆಡ್ಡಿ ಅವರು ಲಿಖಿತ ಭರವಸೆ ನೀಡದ ಕಾರಣ ಪ್ರತಿಭಟನೆ ಮುಂದುರೆಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದರು.</p>.<p>ಅಮರೇಶ ಸಾನಬಾಳ, ಬಸವರಾಜ, ಮೌನೇಶ ಹುಲ್ಲೂರು, ಮಲ್ಲಯ್ಯ, ಶರಣಬಸಪ್ಪ, ಬಸವರಾಜ, ಮಹಾಂತಪ್ಪ, ಮರಿದೇವಪ್ಪ, ಯಲ್ಲಪ್ಪ, ಕನಕಪ್ಪ ನಾಯಕ, ಯಲ್ಲಮ್ಮ, ಶಂಕ್ರಮ್ಮ, ನೀಲಮ್ಮ, ಗಂಗಮ್ಮ, ಚನ್ನಮ್ಮ ಮತ್ತು ಶಾಂತಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕವಿತಾಳ:</strong> ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಮೀಪದ ವಟಗಲ್ ಗ್ರಾಮ ಪಂಚಾಯಿತಿ ಎದುರು ವಿಬಿ ಜಿ ರಾಮ್ ಜಿ ಕೂಲಿಕಾರರು ಗುರುವಾರ ಪ್ರತಿಭಟನೆ ನಡೆಸಿದರು.</p>.<p>‘ಸ.ನಂ 170ರಲ್ಲಿ ಕೆರೆ ಹೂಳೆತ್ತುವ ಕಾಮಗಾರಿಯನ್ನು 14 ದಿನ ನಿರ್ವಹಿಸಿದ ಕೂಲಿಕಾರರಿಗೆ ನಿತ್ಯ ಕೇವಲ ₹60ರಂತೆ ಕೂಲಿ ಪಾವತಿ ಮಾಡಲಾಗಿದೆ. ಅಧಿಕಾರಿಗಳು ಯಂತ್ರ ಬಳಸಿ ಅಧಿಕ ಕಾಮಗಾರಿ ನಿರ್ವಹಿಸಿ ವಂಚಿಸುತ್ತಿದ್ದಾರೆ. ಕೂಲಿ ಪಾವತಿಗೆ ಅನಗತ್ಯ ವಿಳಂಬ ಮಾಡಲಾಗುತ್ತಿದೆ’ ಎಂದು ಕೂಲಿಕಾರರು ಆರೋಪಿಸಿದರು.</p>.<p>‘ನಿತ್ಯ ₹370 ಕೂಲಿ ಪಾವತಿಸಬೇಕು, ಕಾಮಗಾರಿ ಸ್ಥಳದಲ್ಲಿ ಶಾಮಿಯಾನ ಹಾಕಿ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಹಾಗೂ ಕಾಮಗಾರಿ ಸ್ಥಳಕ್ಕೆ ಹೋಗಿ ಬರಲು ಆಟೊ ಒದಗಿಸಬೇಕು’ ಎಂದು ಕಾರ್ಮಿಕ ಸುಭಾಶ್ಚಂದ್ರ ಕಡಬೂರು ಆಗ್ರಹಿಸಿದರು.</p>.<p>‘ಬೇಸಿಗೆ ಆರಂಭವಾಗುತ್ತಿದ್ದು ನೆರಳು ಮತ್ತು ಕುಡಿಯುವ ನೀರಿನ ಕೊರತೆಯಿಂದ ಸಮಸ್ಯೆಯಾಗುತ್ತಿದೆ, ಒಂದು ತಿಂಗಳಿಂದ ಕುಡಿಯುವ ನೀರು ಒದಗಿಸಿಲ್ಲ, ಈ ಬಗ್ಗೆ ಅಧಿಕಾರಿಗಳು ಗಮನಹರಿಸುತ್ತಿಲ್ಲ’ ಎಂದು ಲಕ್ಷ್ಮೀ ದೂರಿದರು.</p>.<p>ಸ್ಥಳಕ್ಕೆ ಆಗಮಿಸಿದ ಮಸ್ಕಿ ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೆಶಕ ಶಿವಾನಂದರೆಡ್ಡಿ ಅವರು ಲಿಖಿತ ಭರವಸೆ ನೀಡದ ಕಾರಣ ಪ್ರತಿಭಟನೆ ಮುಂದುರೆಸಲಾಗುವುದು ಎಂದು ಪ್ರತಿಭಟನಕಾರರು ತಿಳಿಸಿದರು.</p>.<p>ಅಮರೇಶ ಸಾನಬಾಳ, ಬಸವರಾಜ, ಮೌನೇಶ ಹುಲ್ಲೂರು, ಮಲ್ಲಯ್ಯ, ಶರಣಬಸಪ್ಪ, ಬಸವರಾಜ, ಮಹಾಂತಪ್ಪ, ಮರಿದೇವಪ್ಪ, ಯಲ್ಲಪ್ಪ, ಕನಕಪ್ಪ ನಾಯಕ, ಯಲ್ಲಮ್ಮ, ಶಂಕ್ರಮ್ಮ, ನೀಲಮ್ಮ, ಗಂಗಮ್ಮ, ಚನ್ನಮ್ಮ ಮತ್ತು ಶಾಂತಮ್ಮ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>