ಗರ್ಭಿಣಿಯರು, ಸಕ್ಕರೆ, ಬಿಪಿ ಕಾಯಿಲೆ ಇರುವವರು, ಕಿಡ್ನಿ ವೈಫಲ್ಯ ಮತ್ತಿತರ ಕಾಯಿಲೆ ಇರುವವರು ಪರೀಕ್ಷೆ ಮಾಡಿಸಿಕೊಂಡು ವೈದ್ಯರ ಸಲಹೆ ಪಡೆದರೆ ರೋಗ ನಿಯಂತ್ರಿಸಬಹುದು. ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಮುಖಂಡರು ಆರೋಗ್ಯ ಇಲಾಖೆಗೆ ಕೈಜೋಡಿಸುವ ಅಗತ್ಯವಿದೆ.
ಕಾರಣ ಆಯಾ ವಾರ್ಡ್ಗಳ ನಗರಸಭೆ ಸದಸ್ಯರು ಜನರಿಗೆ ಮನವರಿಕೆ ಮಾಡಿ ತಿಳಿ ಹೇಳಿದರೆ ಸಾರ್ವಜನಿಕರಿಂದ ಸ್ಪಂದನೆ ನಿರೀಕ್ಷಿಸಬಹುದಾಗಿದೆ ಎಂದು ವೈದ್ಯರು ಹೇಳುತ್ತಾರೆ.