ಗ್ರಾಮ ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಷಡಕ್ಷರಯ್ಯ ಹಿಂದೆ ಸ್ಮಾರ್ಟ್ ಕ್ಲಾಸ್ ನಿರ್ಮಿಸಬೇಕು ಎಂದು ಹೇಳಿದ್ದರು, ಈಗ ಅನುದಾನ ಬಿಡುಗಡೆ ಆಗಿಲ್ಲ ಎಂದು ಹೇಳುತ್ತಿರುವುದು ಹಣ ದುರುಪಯೋಗ ಪಡಿಸಿಕೊಂಡಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಗ್ರಾಮದ ದುರುಗಪ್ಪ, ಯಲ್ಲಪ್ಪ, ಶೇಖಪ್ಪ, ಲಕ್ಷ್ಮಿ, ಶರಣಮ್ಮ, ರಮೇಶ, ವೀರೇಶ, ಬಸವರಾಜ, ಹುಲುಗಪ್ಪ ಆರೋಪಿಸಿದ್ದಾರೆ.