<p><strong>ಲಿಂಗಸುಗೂರು:</strong> ‘ಪುಸ್ತಕಗಳ ಮೂಲಕ ಓದುವ ಸಂಸ್ಕೃತಿ ಉಳಿಸಬೇಕು. ಪುಸ್ತಕ ಸಂಸ್ಕೃತಿ ಉಳಿದರೆ ಮಾತ್ರ ಸೃಜನಶೀಲ ಬದುಕು ಉಳಿಯಲು ಸಾಧ್ಯ’ ಎಂದು ಕತೆಗಾರ ಶರಣಬಸವ ಕೆ.ಗುಡದಿನ್ನಿ ಹೇಳಿದರು.</p>.<p>ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತಿ ಸಮಿತಿಯ ಸಹಯೋಗದಲ್ಲಿ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಶಿಕ್ಷಕ ಹುಲಪ್ಪ ವಣಕಿಹಾಳ ಮನೆಯಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಹುಲಪ್ಪ ವಣಕಿಹಾಳ ಅವರ ‘ಧರೆಯ ನಕ್ಷತ್ರಗಳು’ ದ್ವಿಪದಿಗಳ ಅದ್ಭುತ ಪುಸ್ತಕವಾಗಿದ್ದು, ಸಮಾಜದ ಓರೆಕೋರೆಗಳನ್ನು ಗುರುತಿಸುವಲ್ಲಿ ಮತ್ತು ತಿದ್ದುವಲ್ಲಿ ಈ ಪುಸ್ತಕದ ಸಾಲುಗಳು ಮುಲಾಮಿನಂತೆ ಕೆಲಸ ಮಾಡುತ್ತವೆ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶಶಿಕಾಂತ ಕಾಡ್ಲೂರು ಮಾತನಾಡಿ,‘ಜಗತ್ತನ್ನು ಆಳುವುದು ದುಡ್ಡು, ಮದ್ದು–ಗುಂಡುಗಳಲ್ಲ ಜ್ಞಾನ. ಆ ಜ್ಞಾನದ ಬೆಳವಣಿಗೆಗೆ ಗ್ರಂಥಾಲಯಗಳು ಹುಟ್ಟಬೇಕು. ಹೊಸ ತಲೆಮಾರನ್ನು ಓದಿನ ಕಡೆಗೆ ತಿರುಗಿಸಬೇಕು’ ಎಂದು ಹೇಳಿದರು.</p>.<p>ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗುಂಡುರಾವ ದೇಸಾಯಿ, ಚಂದ್ರಶೇಖರ ರಕ್ಕಸಗಿ, ಮುಕ್ತುಂಸಾಬ್ ತಾಳಿಕೋಟಿ, ಬಸವರಾಜ ಮ್ಯಾಗೇರಿ, ದೇವೇಂದ್ರಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಿಂಗಸುಗೂರು:</strong> ‘ಪುಸ್ತಕಗಳ ಮೂಲಕ ಓದುವ ಸಂಸ್ಕೃತಿ ಉಳಿಸಬೇಕು. ಪುಸ್ತಕ ಸಂಸ್ಕೃತಿ ಉಳಿದರೆ ಮಾತ್ರ ಸೃಜನಶೀಲ ಬದುಕು ಉಳಿಯಲು ಸಾಧ್ಯ’ ಎಂದು ಕತೆಗಾರ ಶರಣಬಸವ ಕೆ.ಗುಡದಿನ್ನಿ ಹೇಳಿದರು.</p>.<p>ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ಜಿಲ್ಲಾ ಜಾಗೃತಿ ಸಮಿತಿಯ ಸಹಯೋಗದಲ್ಲಿ ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದ ಶಿಕ್ಷಕ ಹುಲಪ್ಪ ವಣಕಿಹಾಳ ಮನೆಯಲ್ಲಿ ಭಾನುವಾರ ನಡೆದ ಮನೆಗೊಂದು ಗ್ರಂಥಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>‘ಹುಲಪ್ಪ ವಣಕಿಹಾಳ ಅವರ ‘ಧರೆಯ ನಕ್ಷತ್ರಗಳು’ ದ್ವಿಪದಿಗಳ ಅದ್ಭುತ ಪುಸ್ತಕವಾಗಿದ್ದು, ಸಮಾಜದ ಓರೆಕೋರೆಗಳನ್ನು ಗುರುತಿಸುವಲ್ಲಿ ಮತ್ತು ತಿದ್ದುವಲ್ಲಿ ಈ ಪುಸ್ತಕದ ಸಾಲುಗಳು ಮುಲಾಮಿನಂತೆ ಕೆಲಸ ಮಾಡುತ್ತವೆ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಸಾಹಿತಿ ಶಶಿಕಾಂತ ಕಾಡ್ಲೂರು ಮಾತನಾಡಿ,‘ಜಗತ್ತನ್ನು ಆಳುವುದು ದುಡ್ಡು, ಮದ್ದು–ಗುಂಡುಗಳಲ್ಲ ಜ್ಞಾನ. ಆ ಜ್ಞಾನದ ಬೆಳವಣಿಗೆಗೆ ಗ್ರಂಥಾಲಯಗಳು ಹುಟ್ಟಬೇಕು. ಹೊಸ ತಲೆಮಾರನ್ನು ಓದಿನ ಕಡೆಗೆ ತಿರುಗಿಸಬೇಕು’ ಎಂದು ಹೇಳಿದರು.</p>.<p>ಜಿಲ್ಲಾ ಜಾಗೃತಿ ಸಮಿತಿ ಸದಸ್ಯ ಗುಂಡುರಾವ ದೇಸಾಯಿ, ಚಂದ್ರಶೇಖರ ರಕ್ಕಸಗಿ, ಮುಕ್ತುಂಸಾಬ್ ತಾಳಿಕೋಟಿ, ಬಸವರಾಜ ಮ್ಯಾಗೇರಿ, ದೇವೇಂದ್ರಪ್ಪ ಹಾಜರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>