ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಮಹಾಶಿವರಾತ್ರಿ ನಿಮಿತ್ತ ರುದ್ರಮುನಿ ದೇವರಿಗೆ ಗುರುವಾರ ವಿಶೇಷ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲಾಯಿತು.
ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡಿದರು. ಆನಂತರ ಪುಷ್ಪಾಲಂಕಾರ ಮಾಡಿ, ಮಂಗಳಾರತಿ ಮಾಡಿದರು. ಭಕ್ತರು ಸರದಿಯಲ್ಲಿ ಶಿವಲಿಂಗ ದರ್ಶನ ಪಡೆದರು.