<p><strong>ರಾಯಚೂರು:</strong> ‘ಜಿಲ್ಲೆಯ ಯುವಜನರು ಭಾರತೀಯ ಸೇನೆಗೆ ಸೇರುವ ಮೂಲಕ ದೇಶಸೇವೆಯಲ್ಲಿ ಮುನ್ನಡೆಯಬೇಕು. ಶಿಸ್ತು , ಧೈರ್ಯ ಮತ್ತು ದೇಶಭಕ್ತಿಯೇ ಸೈನಿಕನ ಅಸ್ತ್ರ ವಿದ್ಯಾರ್ಥಿ ದೆಸೆಯಿಂದಲೇ ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧತೆ ಆರಂಭಿಸಿ’ ಎಂದು ಮೇಜರ್ ಭರತ್ ಭೂಷಣ್ ಹೇಳಿದರು.</p>.<p>ನಗರದ ವೇದಾಂತ ಪದವಿ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪರಿಷತ್ ನಡೆ ಯುವಕರ ಕಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಪಿಯುಸಿ ವಿದ್ಯಾಭ್ಯಾಸದ ನಂತರ ಎನ್ಡಿಎ ಸೇರಿದಂತೆ ಸೈನ್ಯದ ವಿವಿಧ ಪರೀಕ್ಷೆಗಳು ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ತಿಳಿಸಿದರು. ಆಪರೇಷನ್ ಸಿಂಧೂರ್ ಹಾಗೂ ಸೈನ್ಯದ ಇತರ ಮುಖ್ಯವಾದ ಅಪರೇಷನ್ ಗಳಲ್ಲಿ ಯಾವ ರೀತಿಯಾಗಿ ಸೈನ್ಯ ಭಾಗವಹಿಸಿತು ಎಂಬುದನ್ನು ತಿಳಿಸಿದರು.</p>.<p>ರಾಜ್ಯದ ಹಲವು ಭಾಗಗಳಿಂದ ಸೈನ್ಯಕ್ಕೆ ಸಾವಿರಾರು ಮಕ್ಕಳು ಸೇರಿದರೆ ರಾಯಚೂರಿನ ಯುವಜನರು ಮಾತ್ರ ಕಾಣಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು. </p>.<p>ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯಸ್ವಾಮಿ ಕುಕನೂರು, ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಕಾಲೇಜಿನ ಆಡಳಿತಾಧಿಕಾರಿ ರಾಕೇಶ್ ರಾಜಲಬಂಡಿ , ಮ್ಯಾಕ್ಸ್ ವೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ವರಲು,ಕಸಾಪ ಪದಾಧಿಕಾರಿಗಳಾದ ಅಮರೇಶ ಆಶಿಹಾಳ, ದೇವೇಂದ್ರಮ್ಮ, ಶರಣಪ್ಪ ಚಲುವಾದಿ, ರಾವುತರಾವ್ ಬರೂರ, ಪ್ರತಿಭಾ ಗೋನಾಳ, ಮಹಾಂತೇಶ್ ಹೀರಾ, ವೀರೇಶ್ ಬಾಬು, ಧರ್ಮಾವತಿ ನಾಯಕ, ಹಾಗೂ ಇನ್ನಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು:</strong> ‘ಜಿಲ್ಲೆಯ ಯುವಜನರು ಭಾರತೀಯ ಸೇನೆಗೆ ಸೇರುವ ಮೂಲಕ ದೇಶಸೇವೆಯಲ್ಲಿ ಮುನ್ನಡೆಯಬೇಕು. ಶಿಸ್ತು , ಧೈರ್ಯ ಮತ್ತು ದೇಶಭಕ್ತಿಯೇ ಸೈನಿಕನ ಅಸ್ತ್ರ ವಿದ್ಯಾರ್ಥಿ ದೆಸೆಯಿಂದಲೇ ದೈಹಿಕ ಹಾಗೂ ಮಾನಸಿಕವಾಗಿ ಸಿದ್ಧತೆ ಆರಂಭಿಸಿ’ ಎಂದು ಮೇಜರ್ ಭರತ್ ಭೂಷಣ್ ಹೇಳಿದರು.</p>.<p>ನಗರದ ವೇದಾಂತ ಪದವಿ ಮಹಾವಿದ್ಯಾಲಯದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿದ್ದ ಪರಿಷತ್ ನಡೆ ಯುವಕರ ಕಡೆ ಎಂಬ ಕಾರ್ಯಕ್ರಮದಲ್ಲಿ ಮಾತನಾಡಿದರು.</p>.<p>ಪಿಯುಸಿ ವಿದ್ಯಾಭ್ಯಾಸದ ನಂತರ ಎನ್ಡಿಎ ಸೇರಿದಂತೆ ಸೈನ್ಯದ ವಿವಿಧ ಪರೀಕ್ಷೆಗಳು ಯಾವ ರೀತಿಯಲ್ಲಿ ಇರುತ್ತದೆ ಎಂಬುದನ್ನು ತಿಳಿಸಿದರು. ಆಪರೇಷನ್ ಸಿಂಧೂರ್ ಹಾಗೂ ಸೈನ್ಯದ ಇತರ ಮುಖ್ಯವಾದ ಅಪರೇಷನ್ ಗಳಲ್ಲಿ ಯಾವ ರೀತಿಯಾಗಿ ಸೈನ್ಯ ಭಾಗವಹಿಸಿತು ಎಂಬುದನ್ನು ತಿಳಿಸಿದರು.</p>.<p>ರಾಜ್ಯದ ಹಲವು ಭಾಗಗಳಿಂದ ಸೈನ್ಯಕ್ಕೆ ಸಾವಿರಾರು ಮಕ್ಕಳು ಸೇರಿದರೆ ರಾಯಚೂರಿನ ಯುವಜನರು ಮಾತ್ರ ಕಾಣಸಿಗುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಮುಂದಿನ ದಿನಗಳಲ್ಲಿ ಸೈನ್ಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಬೇಕು ಎಂದರು. </p>.<p>ಕಾರ್ಯನಿರತ ಪತ್ರಕರ್ತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧಯ್ಯಸ್ವಾಮಿ ಕುಕನೂರು, ತಾಲ್ಲೂಕು ಕಸಾಪ ಅಧ್ಯಕ್ಷ ಡಾ.ಬಿ.ವಿಜಯ ರಾಜೇಂದ್ರ ಕಾಲೇಜಿನ ಆಡಳಿತಾಧಿಕಾರಿ ರಾಕೇಶ್ ರಾಜಲಬಂಡಿ , ಮ್ಯಾಕ್ಸ್ ವೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ವೆಂಕಟೇಶ್ವರಲು,ಕಸಾಪ ಪದಾಧಿಕಾರಿಗಳಾದ ಅಮರೇಶ ಆಶಿಹಾಳ, ದೇವೇಂದ್ರಮ್ಮ, ಶರಣಪ್ಪ ಚಲುವಾದಿ, ರಾವುತರಾವ್ ಬರೂರ, ಪ್ರತಿಭಾ ಗೋನಾಳ, ಮಹಾಂತೇಶ್ ಹೀರಾ, ವೀರೇಶ್ ಬಾಬು, ಧರ್ಮಾವತಿ ನಾಯಕ, ಹಾಗೂ ಇನ್ನಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>