ಮುಖ್ಯಾಧಿಕಾರಿ ನರಸಪ್ಪ ತಹಶೀಲ್ದಾರ್ ಅವರು, ಮನೆ ಮನೆಗೆ ಭೇಟಿ ನೀಡಿ, ‘ಮನೆಯ ಚಾವಣಿ, ಬಚ್ಚಲು, ಬಟ್ಟೆ, ಮುಸರಿ ಇತರೆ ಬಳಕೆ ನೀರನ್ನು ಸಂತೆ ಬಜಾರ ಬಯಲಿಗೆ ಬಿಡದಿರಿ. ನಿಮ್ಮ ಮನೆಗಳಲ್ಲಿ ಇಂಗು ಗುಂಡಿ ಮಾಡಿಕೊಂಡು ವಾತಾವರಣ ಸ್ವಚ್ಛಂದ ಇಡಲು ಸಹಕರಿಸಬೇಕು. ಮೇಲಿಂದ ಮೇಲೆ ಮಾಡುವ ಮನವಿಗೆ ಸ್ಪಂದಿಸದೆ ಹೋದಲ್ಲಿ ಅಂತಹ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.