ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶೀಘ್ರದಲ್ಲಿಯೇ ಬಸನಗೌಡ ಯತ್ನಾಳ ಹುಚ್ಚಾಸ್ಪತ್ರೆಗೆ: ಟೀಕೆ

Last Updated 11 ಏಪ್ರಿಲ್ 2021, 5:30 IST
ಅಕ್ಷರ ಗಾತ್ರ

ಸಿಂಧನೂರು: ‘ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರು ಸದ್ಯದಲ್ಲೇ ಹುಚ್ಚಾಸ್ಪತ್ರೆಗೆ ಸೇರಲಿದ್ದಾರೆ. ಅವರ ಹೇಳಿಕೆಗಳು ಯಾವ ನಾಯಕರು ಮೆಚ್ಚುವಂತಿಲ್ಲ‘ ಎಂದು ಶಾಸಕ ರೇಣುಕಾಚಾರ್ಯ ಟೀಕಿಸಿದರು.

ನಗರದ ಕೋಟೆ ಬಡಾವಣೆಯಲ್ಲಿರುವ ಬಸಪ್ಪಯ್ಯಸ್ವಾಮಿ ಸಾಲಿಮಠ ಅವರ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬಿಜೆಪಿ ಸರ್ಕಾರದ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಜನರು ಬಿಜೆಪಿಗೆ ಮತ ಹಾಕುತ್ತಾರೆ’ ಎಂದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರ ಬಗ್ಗೆ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಅವರು ಹಗುರವಾಗಿ ಮಾತನಾಡುತ್ತಿದ್ದಾರೆ. ಉಪ ಚುನಾವಣೆಗಳ ನಂತರ ಪಕ್ಷದಲ್ಲಿ ಬಿರುಕು ಉಂಟಾಗುವುದಿಲ್ಲ. ಸಚಿವ ಸ್ಥಾನಕ್ಕಾಗಿ ಯಾರು ಕಿತ್ತಾಡುವುದಿಲ್ಲ. ಪಕ್ಷ ಸಂಘಟನೆಗೆ ಶಾಸಕರು ದುಡಿಯುತ್ತೇವೆ’ ಎಂದರು. ಜಂಗಮ ಸಮಾಜದ ಮುಖಂಡರಾದ ಬಸವರಾಜ್ ಬಾದರ್ಲಿ ಹಿರೇಮಠ, ಬಸಪ್ಪಯ್ಯಸ್ವಾಮಿ ಸಾಲಿಮಠ, ಕುಮಾರ್, ಶ್ರೀಕಾಂತ್ ಹಿರೇಮಠ್, ಶಶಿಧರ್ ಹಿರೇಮಠ್, ಆದಿಬಸವ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT