ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಯಚೂರು: ಜಗಳ ಬಗೆಹರಿಸಲು ಬಂದ ಯುವಕನ ಹತ್ಯೆ

Last Updated 2 ಸೆಪ್ಟೆಂಬರ್ 2020, 6:34 IST
ಅಕ್ಷರ ಗಾತ್ರ

ರಾಯಚೂರು: ಎರಡು ಗುಂಪಿನ ಮಧ್ಯೆ ಉಂಟಾಗಿದ್ದ ಜಗಳ ಬಗೆಹರಿಸಲು ಬಂದ ಯುವಕನನ್ನೇ ಮಾರಕಾಸ್ತ್ರದಿಂದ ಹತ್ಯೆ ಮಾಡಿದ ಘಟನೆ ನಗರದ ಗಂಗಾ ನಿವಾಸ ಪ್ರದೇಶದಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

ಪಾರ್ ಕೋಟ್ ನಿವಾಸಿ ಶೇಕ್ ಬಡೇಸಾಬ್ ಅಲಿಯಾಸ್ ಸಲ್ಮಾನ್ ಮೆಹಬೂಬ್ (28) ಹತ್ಯೆಗೀಡಾದ ಯುವಕ. ಬೈಕ್ ನಿಲುಗಡೆ ವಿಚಾರವಾಗಿ ಯುವಕರ ಮಧ್ಯೆ ಜಗಳ ಆರಂಭವಾಗಿತ್ತು. ಅದರಲ್ಲಿ ಒಬ್ಬ ಯುವಕ ಮೃತ ಶೇಕ್ ಬಡೇಸಾಬ್‌ನನ್ನು ನೆರವಿಗಾಗಿ ಸ್ಥಳಕ್ಕೆ ಕರೆಸಿದ್ದ ಎನ್ನಲಾಗಿದೆ.

ವಿವಾದ ಆಲಿಸಲು ಬರುತ್ತಿದ್ದಂತೆ ನಾಲ್ಕು ಜನರ ಗುಂಪೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಹತ್ಯೆ ಮಾಡಿದೆ ಎಂದು ತಿಳಿಸಲಾಗಿದೆ.

ಸದರ್ ಬಜಾರ್ ಠಾಣೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT