<p><strong>ಮಸ್ಕಿ:</strong> ಪಟ್ಟಣದ ಹೆದ್ದಾರಿ ಆಧುನೀಕರಣ ಕಾಮಗಾರಿ ಒತ್ತುವರಿ ತೆರವು ವಿಳಂಬದಿಂದ ನಿಧಾನಗತಿಯಲ್ಲಿ ಸಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.</p>.<p>ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಂದು ವರ್ಷದಿಂದ ಪುರಸಭೆಗೆ ಹಲವು ಭಾರಿ ಪತ್ರಗಳನ್ನು ಬರೆದು ಹೆದ್ದಾರಿ ಮಧ್ಯದಿಂದ ಎರಡು ಕಡೆ 15 ಮೀಟರ್ ಒಳಗೆ ಬರುವ ಕಟ್ಟಡಗಳ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದರು.</p>.<p>ಪುರಸಭೆ ಮುಖ್ಯಾಧಿಕಾರಿ ಎಸ್.ಬಿ. ತೋಡಕರ್ ಅವರು ಗುರುತು ಮಾಡಿದ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ ಕೆಲವೊಂದು ಕಡೆ ತೆರವು ವಿಳಂಬವಾಗಿರುವುದು ಸಾರ್ವಜನಿಕರ ಆರೋಪಕ್ಕೆ ಕಾರಣವಾಗಿದೆ.</p>.<p>ರಸ್ತೆ ಆಧುನೀಕರಣ ಆಗುತ್ತದೆ ಎಂಬ ಕಾರಣಕ್ಕೆ ಕೆಲವರು ಅಶೋಕ ವೃತ್ತದಿಂದ ಗಚ್ಚಿನಮಠದವರೆಗೆ ಪುರಸಭೆಗೆ ಸಹಕಾರ ನೀಡಿ ಸ್ವಇಚ್ಚೆಯಿಂದ ಒತ್ತುವರಿ ತೆರವು ಮಾಡಿಕೊಂಡಿದ್ದಾರೆ. ಮೂರು–ನಾಲ್ಕು ಕಡೆ ತೆರವಿಗೆ ಕೆಲವರು ಅಡ್ಡಿಪಡಿಸುತ್ತಿದ್ದು ಸರ್ವಿಸ್ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದೆ.</p>.<p>ಒತ್ತುವರಿ ತೆರವುಗೊಂಡರೆ ಮಾತ್ರ ರಸ್ತೆ ಬದಿಯ ವಿದ್ಯುತ್ ಕಂಬಗಳ ಸ್ಥಳಾಂತರ ಸಾಧ್ಯ ಎಂದು ಜೆಸ್ಕಾಂ ಎಇಇ ವೆಂಕಟೇಶ ಹೇಳಿದ್ದಾರೆ. ಕಂಬಳಿಗೆ ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಪುರಸಭೆಗೆ ಪತ್ರ ಬರೆದಿದ್ದಾರೆ.</p>.<p>ಕನಕವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ರಸ್ತೆಯ ಎರಡು ಬದಿ ಎನ್.ಎ ಆಗಿ ಮಾರಾಟವಾಗಿವೆ. ನಿವೇಶನ ಖರೀದಿಸಿದವರು ಹೆದ್ದಾರಿ ನಿಯಮದಂತೆ ವಾಣಿಜ್ಯ ಮಳಿಗೆ, ಮನೆಗಳನ್ನು ಕಟ್ಟಿಸಿಕೊಂಡು ಹತ್ತಾರು ವರ್ಷಗಳಾಗಿವೆ.</p>.<p>ಹೆದ್ದಾರಿ ಮದ್ಯಭಾಗದಿಂದ 15 ಅಡಿ ಒಳಗೆ ಯಾವುದೇ ಕಟ್ಟಡಗಳು ಇಲ್ಲದಿದ್ದರೂ ಸಹ ಕಟ್ಟಡ ಒತ್ತುವರಿ ತೆರವು ಮಾಡುವಂತೆ ಜಮೀನಿನ ಮಾಲೀಕರಿಗೆ ನೋಟೀಸ್ ನೀಡಿ ಪುರಸಭೆ ಎಡವಟ್ಟು ಮಾಡಿಕೊಂಡಿದೆ.</p>.<p>ಪುರಸಭೆ ನೀಡಿದ ನೋಟೀಸ್ ಮೇಲೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಶಾಸಕರು, ಸಹಾಯಕ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿ ಕಾಮಗಾರಿ ಆರಂಭಕ್ಕೆ ಗಮನಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹ.</p>.<p>ಕಟ್ಟಡಗಳ ಒತ್ತುವರಿ ತೆರವು ಬಹುತೇಕ ಮಾಡಲಾಗಿದೆ. ಕೆಲವೊಬ್ಬರು ತಾವೇ ತೆಗೆದುಕೊಳ್ಳುತ್ತೇವೆ ಎಂದು ಲಿಖಿತವಾಗಿ ಬರೆದು ಕೊಟ್ಟಿದ್ದರಿಂದ ಬಿಡಲಾಗಿದೆ. ಮೂರು ದಿನ ಕಾದು ಪುರಸಭೆಯಿಂದ ತೆರವುಗೊಳಿಸಲಾಗುವುದು </p><p><strong>-ಎಸ್. ಬಿ. ತೋಡಕರ್ ಪುರಸಭೆ ಮುಖ್ಯಾಧಿಕಾರಿ ಮಸ್ಕಿ</strong></p>.<p>ಪುರಸಭೆ ಅಧಿಕಾರಿಗಳು ಬಾಕಿ ಉಳಿದಿರುವ ಹೆದ್ದಾರಿ ಒತ್ತುವರಿಗಳನ್ನು ಶೀಘ್ರ ತೆರವುಗೊಳಿಸಿ ರಸ್ತೆ ಕಾಮಗಾರಿಗೆ ಬೇಗ ಮುಗಿಸಲು ಸಹಕಾರ ನೀಡುವ ಮೂಲಕ ವಾಹನ ದಟ್ಟಣಿಗೆ ಶಾಸ್ವತ ಪರಿಹಾರ ನೀಡಲು ಮುಂದಾಗಲಿ </p><p><strong>-ರವಿಕುಮಾರ ಚಿಗರಿ ಭೋವಿ ಯುವ ಸಮಾಜದ ಜಿಲ್ಲಾಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮಸ್ಕಿ:</strong> ಪಟ್ಟಣದ ಹೆದ್ದಾರಿ ಆಧುನೀಕರಣ ಕಾಮಗಾರಿ ಒತ್ತುವರಿ ತೆರವು ವಿಳಂಬದಿಂದ ನಿಧಾನಗತಿಯಲ್ಲಿ ಸಾಗಿದ್ದು ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.</p>.<p>ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಒಂದು ವರ್ಷದಿಂದ ಪುರಸಭೆಗೆ ಹಲವು ಭಾರಿ ಪತ್ರಗಳನ್ನು ಬರೆದು ಹೆದ್ದಾರಿ ಮಧ್ಯದಿಂದ ಎರಡು ಕಡೆ 15 ಮೀಟರ್ ಒಳಗೆ ಬರುವ ಕಟ್ಟಡಗಳ ಒತ್ತುವರಿ ತೆರವು ಮಾಡುವಂತೆ ಮನವಿ ಮಾಡಿದ್ದರು.</p>.<p>ಪುರಸಭೆ ಮುಖ್ಯಾಧಿಕಾರಿ ಎಸ್.ಬಿ. ತೋಡಕರ್ ಅವರು ಗುರುತು ಮಾಡಿದ ಒತ್ತುವರಿ ತೆರವುಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ ಕೆಲವೊಂದು ಕಡೆ ತೆರವು ವಿಳಂಬವಾಗಿರುವುದು ಸಾರ್ವಜನಿಕರ ಆರೋಪಕ್ಕೆ ಕಾರಣವಾಗಿದೆ.</p>.<p>ರಸ್ತೆ ಆಧುನೀಕರಣ ಆಗುತ್ತದೆ ಎಂಬ ಕಾರಣಕ್ಕೆ ಕೆಲವರು ಅಶೋಕ ವೃತ್ತದಿಂದ ಗಚ್ಚಿನಮಠದವರೆಗೆ ಪುರಸಭೆಗೆ ಸಹಕಾರ ನೀಡಿ ಸ್ವಇಚ್ಚೆಯಿಂದ ಒತ್ತುವರಿ ತೆರವು ಮಾಡಿಕೊಂಡಿದ್ದಾರೆ. ಮೂರು–ನಾಲ್ಕು ಕಡೆ ತೆರವಿಗೆ ಕೆಲವರು ಅಡ್ಡಿಪಡಿಸುತ್ತಿದ್ದು ಸರ್ವಿಸ್ ರಸ್ತೆ ಕಾಮಗಾರಿಗೆ ಅಡ್ಡಿಯಾಗಿದೆ.</p>.<p>ಒತ್ತುವರಿ ತೆರವುಗೊಂಡರೆ ಮಾತ್ರ ರಸ್ತೆ ಬದಿಯ ವಿದ್ಯುತ್ ಕಂಬಗಳ ಸ್ಥಳಾಂತರ ಸಾಧ್ಯ ಎಂದು ಜೆಸ್ಕಾಂ ಎಇಇ ವೆಂಕಟೇಶ ಹೇಳಿದ್ದಾರೆ. ಕಂಬಳಿಗೆ ಸೂಕ್ತ ಸ್ಥಳ ಗುರುತಿಸಿಕೊಡುವಂತೆ ಪುರಸಭೆಗೆ ಪತ್ರ ಬರೆದಿದ್ದಾರೆ.</p>.<p>ಕನಕವೃತ್ತದಿಂದ ವಾಲ್ಮೀಕಿ ವೃತ್ತದವರೆಗೆ ರಸ್ತೆಯ ಎರಡು ಬದಿ ಎನ್.ಎ ಆಗಿ ಮಾರಾಟವಾಗಿವೆ. ನಿವೇಶನ ಖರೀದಿಸಿದವರು ಹೆದ್ದಾರಿ ನಿಯಮದಂತೆ ವಾಣಿಜ್ಯ ಮಳಿಗೆ, ಮನೆಗಳನ್ನು ಕಟ್ಟಿಸಿಕೊಂಡು ಹತ್ತಾರು ವರ್ಷಗಳಾಗಿವೆ.</p>.<p>ಹೆದ್ದಾರಿ ಮದ್ಯಭಾಗದಿಂದ 15 ಅಡಿ ಒಳಗೆ ಯಾವುದೇ ಕಟ್ಟಡಗಳು ಇಲ್ಲದಿದ್ದರೂ ಸಹ ಕಟ್ಟಡ ಒತ್ತುವರಿ ತೆರವು ಮಾಡುವಂತೆ ಜಮೀನಿನ ಮಾಲೀಕರಿಗೆ ನೋಟೀಸ್ ನೀಡಿ ಪುರಸಭೆ ಎಡವಟ್ಟು ಮಾಡಿಕೊಂಡಿದೆ.</p>.<p>ಪುರಸಭೆ ನೀಡಿದ ನೋಟೀಸ್ ಮೇಲೆ ಹೈಕೋರ್ಟ್ನಿಂದ ತಡೆಯಾಜ್ಞೆ ತಂದು ಕಾಮಗಾರಿ ಸ್ಥಗಿತಗೊಳಿಸಿದ್ದಾರೆ. ಶಾಸಕರು, ಸಹಾಯಕ ಆಯುಕ್ತರು, ಪುರಸಭೆ ಮುಖ್ಯಾಧಿಕಾರಿಗಳು ಮಧ್ಯ ಪ್ರವೇಶಿಸಿ ಸಮಸ್ಯೆ ಇತ್ಯರ್ಥಪಡಿಸಿ ಕಾಮಗಾರಿ ಆರಂಭಕ್ಕೆ ಗಮನಹರಿಸಲಿ ಎಂಬುದು ಸಾರ್ವಜನಿಕರ ಆಗ್ರಹ.</p>.<p>ಕಟ್ಟಡಗಳ ಒತ್ತುವರಿ ತೆರವು ಬಹುತೇಕ ಮಾಡಲಾಗಿದೆ. ಕೆಲವೊಬ್ಬರು ತಾವೇ ತೆಗೆದುಕೊಳ್ಳುತ್ತೇವೆ ಎಂದು ಲಿಖಿತವಾಗಿ ಬರೆದು ಕೊಟ್ಟಿದ್ದರಿಂದ ಬಿಡಲಾಗಿದೆ. ಮೂರು ದಿನ ಕಾದು ಪುರಸಭೆಯಿಂದ ತೆರವುಗೊಳಿಸಲಾಗುವುದು </p><p><strong>-ಎಸ್. ಬಿ. ತೋಡಕರ್ ಪುರಸಭೆ ಮುಖ್ಯಾಧಿಕಾರಿ ಮಸ್ಕಿ</strong></p>.<p>ಪುರಸಭೆ ಅಧಿಕಾರಿಗಳು ಬಾಕಿ ಉಳಿದಿರುವ ಹೆದ್ದಾರಿ ಒತ್ತುವರಿಗಳನ್ನು ಶೀಘ್ರ ತೆರವುಗೊಳಿಸಿ ರಸ್ತೆ ಕಾಮಗಾರಿಗೆ ಬೇಗ ಮುಗಿಸಲು ಸಹಕಾರ ನೀಡುವ ಮೂಲಕ ವಾಹನ ದಟ್ಟಣಿಗೆ ಶಾಸ್ವತ ಪರಿಹಾರ ನೀಡಲು ಮುಂದಾಗಲಿ </p><p><strong>-ರವಿಕುಮಾರ ಚಿಗರಿ ಭೋವಿ ಯುವ ಸಮಾಜದ ಜಿಲ್ಲಾಧ್ಯಕ್ಷ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>