ನಾಗ ಪಂಚಮಿ ನಿಮಿತ್ತ ಮನೆಯಲ್ಲಿ ಶೇಂಗಾ, ಪುಟಾಣಿ, ರವೆಯ ಉಂಡಿಗಳ ಜೊತೆಗೆ ಕಡಲೆ ಕಾಳು, ಜೋಳ ತಯಾರಿಸಿದ ಅರಳುಗಳ ನೈವೇದ್ಯ ಹಾಗೂ ಹತ್ತಿಯಿಂದ ತಯಾರಿಸಿದ ಬತ್ತಿ, ಕೊಬ್ಬರಿ ಬಟ್ಟಲಿನಲ್ಲಿ ಬೆಲ್ಲ ಮಿಶ್ರಣ ಮಾಡಿ ನಾಗದೇವರಿಗೆ, ಕುಟುಂಬದವರಿಗೆ, ಒಳ್ಳೆಯದು ಆಗಲಿ ಎಂದು ಅವ್ವನ ಪಾಲು, ಅಪ್ಪನ ಪಾಲು, ಅಣ್ಣ, ತಮ್ಮ, ಅಕ್ಕ, ತಂಗಿ ಕೊನೆಗೆ ಸರ್ವರ ಪಾಲು ಎಂದು ಹೇಳಿ, ನಾಗಮುರ್ತಿಗಳಿಗೆ ಹಾಲು ಎರೆದರು.