ಸಗಮಕುಂಟ, ಯರಗುಂಟ, ಶಿವವಿಲಾಸ ನಗರ, ಕೊರವಿಹಾಳ್, ಕೊರ್ತಕುಂದ ಗ್ರಾಮಗಳ ಕೂಲಿಕಾರರ ಗುಳೆ ತಡೆಗೆ ಈ ಉದ್ಯೋಗ ಖಾತ್ರಿ ಯೋಜನೆ ನೆರವಾಗಿದೆ. 5 ಎಕರೆ ಪ್ರದೇಶದ ಕೆರೆಯಲ್ಲಿ ನೀರು ಸಂಗ್ರಹವಾದರೆ, ಅಂತರ್ಜಲ ಮಟ್ಟ ಹೆಚ್ಚುವುದಲ್ಲದೆ, ಬೇಸಿಗೆಯಲ್ಲಿ ಈ ಕೆರೆ, ಜನ ಜಾನುವಾರುಗಳಿಗೆ ಹೆಚ್ಚು ಉಪಯುಕ್ತವಾಗಲಿದೆ. ರೈತರ ಹೊಲಗಳಿಗೆ ನೀರು ಹಾಯಿಸಲು, ಕೊಳವೆ ಬಾವಿಗೆ ಜಲ ಮರುಪೂರಣಕ್ಕೆ ಅನುಕೂಲ ಆಗಲಿದೆ.