<p><strong>ರಾಯಚೂರು</strong>: ನಗರದಲ್ಲಿ ಯವಕರು ತಂಡ ಕಟ್ಟಿಕೊಂಡು ಹೋಟೆಲ್ ಹಾಗೂ ಖಾಸಗಿ ಸಭಾಂಗಣದಲ್ಲಿ ನೃತ್ಯ, ಸಂಗೀತ ಆಯೋಜಿಸುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಂಡರು.</p>.<p>ಅಪಾರ್ಟ್ಮೆಂಟ್ಗಳಲ್ಲಿ ಕುಟುಂಬಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದವು. ಅಪಾರ್ಟ್ಮೆಂಟ್ ಆವರಣದಲ್ಲಿ ಸಹ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕುಟುಂಬದ ಸದಸ್ಯರು ಮಕ್ಕಳೊಂದಿಗೆ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<p>ಯುವಕರು ನಗರದ ಹೊರ ವಲಯಗಳಲ್ಲಿ ‘ಕ್ಯಾಂಪ್ ಫೈರ್’ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಪಾನಗೋಷ್ಠಿಯಲ್ಲಿ ಪಾಲ್ಗೊಂಡು ಸಂಭ್ರಮ ಆಚರಣೆ ಮಾಡಿದರು. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ತಂಪು ಪಾನೀಯ ಸೇವಿಸಿ ಚಲನಚಿತ್ರಗಳ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.</p>.<p>ಮಾಂಸಾಹಾರಿ ಹೋಟೆಲ್ ಹಾಗೂ ರೆಸ್ಟೋರಂಟ್ಗಳಲ್ಲಿ ಚಿಕನ್ ಹಾಗೂ ಮಟನ್ ಬಿರಿಯಾನಿಗೆ ಬೇಡಿಕೆ ಇದ್ದ ಕಾರಣ ಗ್ರಾಹಕರಿಗೆ ಸಕಾಲದಲ್ಲಿ ಪೂರೈಕೆ ಮಾಡುವುದು ಸವಾಲಾಗಿ ಪರಿಣಮಿಸಿತು. ಅನೇಕ ಜನ ಕುಟುಂಬದೊಂದಿಗೆ ಬಿರಿಯಾನಿ ಸವಿಯಲು ಹೋಟೆಲ್ಗಳಿಂದ ಕೊಂಡೊಯ್ದರು.</p>.<p>ಕೆಲ ಮನೆಗಳಲ್ಕೇ ಬಾಡೂಟ ಸಿದ್ಧಪಡಿಸಿದ ಕಾರಣ ನಗರದ ರೊಟ್ಟಿ ಕೇಂದ್ರಗಳಲ್ಲಿ ಜಪಾತಿ, ಜೋಳದ ರೊಟ್ಟಿ ಹಾಗೂ ಸಜ್ಜೆ ರೊಟ್ಟಿ ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು. ರೊಟ್ಟಿ ಕೇಂದ್ರಗಳಲ್ಲಿ ವರ್ಷಾಂತ್ಯಕ್ಕೆ ಚೆನ್ನಾಗಿ ವ್ಯಾಪರ ವಹಿವಾಟು ನಡೆಯಿತು.</p>.<p>ಕೇಕ್ಗೆ ಭಾರಿ ಬೇಡಿಕೆ ಬಂದಿತ್ತು. ರಾತ್ರಿ 9 ಗಂಟೆ ವೇಳೆಗೆ ನಗರದ ಎಲ್ಲ ಹೋಟೆ್ಲ್ಗಳಲ್ಲಿನ ಕೇಕ್ ಮಾರಾಟವಾಗಿದ್ದವು. ತಡವಾಗಿ ಬೇಕರಿಗಳಿಗೆ ಬಂದಿದ್ದ ಯುವಕ, ಯುವತಿಯರು ನಿರಾಶೆಯಿಂದ ಮನೆಗಳಯತ್ತ ಹೆಜ್ಜೆ ಹಾಕಿದರು.</p>.<p>2026ರ ಹೊಸ ವರ್ಷಾಚರಣೆಯ ಕಾರಣ ಚರ್ಚ್ಗಳು, ಉದ್ಯಾನಗಳು, ಕೇಂದ್ರ ಬಸ್-ನಿಲ್ದಾಣ, ರೈಲು ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು.</p>.<p><strong>ಭದ್ರತೆ ಕಟ್ಟುನಿಟ್ಟು</strong></p><p>‘ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಲ್ವರು ಡಿವೈಎಸ್ಪಿ 15 ಸಿಪಿಐ 23 ಪಿಎಸ್ಐ 84 ಎಎಸ್ಐ 510 ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ ಡಿಎಆರ್ನ 9 ತುಕಡಿ ಕೆ.ಎಸ್.ಆರ್.ಪಿ- 2 ತುಕಡಿ ಎ.ಎಸ್.ಸಿ 1 ತಂಡವನ್ನು ನಿಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು. ‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಶಾಂತಿಯುತವಾಗಿ ವರ್ಷಾಚಣೆ ಮಾಡಲಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಾಯಚೂರು</strong>: ನಗರದಲ್ಲಿ ಯವಕರು ತಂಡ ಕಟ್ಟಿಕೊಂಡು ಹೋಟೆಲ್ ಹಾಗೂ ಖಾಸಗಿ ಸಭಾಂಗಣದಲ್ಲಿ ನೃತ್ಯ, ಸಂಗೀತ ಆಯೋಜಿಸುವ ಮೂಲಕ ಹೊಸ ವರ್ಷವನ್ನು ಬರ ಮಾಡಿಕೊಂಡರು.</p>.<p>ಅಪಾರ್ಟ್ಮೆಂಟ್ಗಳಲ್ಲಿ ಕುಟುಂಬಗಳು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿದ್ದವು. ಅಪಾರ್ಟ್ಮೆಂಟ್ ಆವರಣದಲ್ಲಿ ಸಹ ಭೋಜನದ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಕುಟುಂಬದ ಸದಸ್ಯರು ಮಕ್ಕಳೊಂದಿಗೆ ಡಿಜೆ ಸಂಗೀತಕ್ಕೆ ಹೆಜ್ಜೆ ಹಾಕಿ ಸಂಭ್ರಮಿಸಿದರು.</p>.<p>ಯುವಕರು ನಗರದ ಹೊರ ವಲಯಗಳಲ್ಲಿ ‘ಕ್ಯಾಂಪ್ ಫೈರ್’ ಮಾದರಿಯಲ್ಲಿ ಕಾರ್ಯಕ್ರಮ ಆಯೋಜಿಸಿ ಪಾನಗೋಷ್ಠಿಯಲ್ಲಿ ಪಾಲ್ಗೊಂಡು ಸಂಭ್ರಮ ಆಚರಣೆ ಮಾಡಿದರು. ಹಾಸ್ಟೆಲ್ಗಳಲ್ಲಿ ವಿದ್ಯಾರ್ಥಿಗಳು ಕೇಕ್ ಕತ್ತರಿಸಿ ತಂಪು ಪಾನೀಯ ಸೇವಿಸಿ ಚಲನಚಿತ್ರಗಳ ಹಾಡಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು.</p>.<p>ಮಾಂಸಾಹಾರಿ ಹೋಟೆಲ್ ಹಾಗೂ ರೆಸ್ಟೋರಂಟ್ಗಳಲ್ಲಿ ಚಿಕನ್ ಹಾಗೂ ಮಟನ್ ಬಿರಿಯಾನಿಗೆ ಬೇಡಿಕೆ ಇದ್ದ ಕಾರಣ ಗ್ರಾಹಕರಿಗೆ ಸಕಾಲದಲ್ಲಿ ಪೂರೈಕೆ ಮಾಡುವುದು ಸವಾಲಾಗಿ ಪರಿಣಮಿಸಿತು. ಅನೇಕ ಜನ ಕುಟುಂಬದೊಂದಿಗೆ ಬಿರಿಯಾನಿ ಸವಿಯಲು ಹೋಟೆಲ್ಗಳಿಂದ ಕೊಂಡೊಯ್ದರು.</p>.<p>ಕೆಲ ಮನೆಗಳಲ್ಕೇ ಬಾಡೂಟ ಸಿದ್ಧಪಡಿಸಿದ ಕಾರಣ ನಗರದ ರೊಟ್ಟಿ ಕೇಂದ್ರಗಳಲ್ಲಿ ಜಪಾತಿ, ಜೋಳದ ರೊಟ್ಟಿ ಹಾಗೂ ಸಜ್ಜೆ ರೊಟ್ಟಿ ಖರೀದಿಸಲು ಗ್ರಾಹಕರು ಮುಗಿಬಿದ್ದಿದ್ದರು. ರೊಟ್ಟಿ ಕೇಂದ್ರಗಳಲ್ಲಿ ವರ್ಷಾಂತ್ಯಕ್ಕೆ ಚೆನ್ನಾಗಿ ವ್ಯಾಪರ ವಹಿವಾಟು ನಡೆಯಿತು.</p>.<p>ಕೇಕ್ಗೆ ಭಾರಿ ಬೇಡಿಕೆ ಬಂದಿತ್ತು. ರಾತ್ರಿ 9 ಗಂಟೆ ವೇಳೆಗೆ ನಗರದ ಎಲ್ಲ ಹೋಟೆ್ಲ್ಗಳಲ್ಲಿನ ಕೇಕ್ ಮಾರಾಟವಾಗಿದ್ದವು. ತಡವಾಗಿ ಬೇಕರಿಗಳಿಗೆ ಬಂದಿದ್ದ ಯುವಕ, ಯುವತಿಯರು ನಿರಾಶೆಯಿಂದ ಮನೆಗಳಯತ್ತ ಹೆಜ್ಜೆ ಹಾಕಿದರು.</p>.<p>2026ರ ಹೊಸ ವರ್ಷಾಚರಣೆಯ ಕಾರಣ ಚರ್ಚ್ಗಳು, ಉದ್ಯಾನಗಳು, ಕೇಂದ್ರ ಬಸ್-ನಿಲ್ದಾಣ, ರೈಲು ನಿಲ್ದಾಣದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿತ್ತು.</p>.<p><strong>ಭದ್ರತೆ ಕಟ್ಟುನಿಟ್ಟು</strong></p><p>‘ಜಿಲ್ಲೆಯಾದ್ಯಂತ ಕಟ್ಟು ನಿಟ್ಟಿನ ಭದ್ರತಾ ವ್ಯವಸ್ಥೆ ಮಾಡಲಾಗಿದೆ. ಇಬ್ಬರು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಾಲ್ವರು ಡಿವೈಎಸ್ಪಿ 15 ಸಿಪಿಐ 23 ಪಿಎಸ್ಐ 84 ಎಎಸ್ಐ 510 ಹೆಡ್ ಕಾನ್ಸ್ಟೆಬಲ್ ಹಾಗೂ ಕಾನ್ಸ್ಟೆಬಲ್ ಡಿಎಆರ್ನ 9 ತುಕಡಿ ಕೆ.ಎಸ್.ಆರ್.ಪಿ- 2 ತುಕಡಿ ಎ.ಎಸ್.ಸಿ 1 ತಂಡವನ್ನು ನಿಯೋಜನೆ ಮಾಡಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ ತಿಳಿಸಿದರು. ‘ಹೊಸ ವರ್ಷಾಚರಣೆ ಸಂದರ್ಭದಲ್ಲಿ ಅಹಿತಕರ ಘಟನೆಗಳು ನಡೆದ ಬಗ್ಗೆ ವರದಿಯಾಗಿಲ್ಲ. ಶಾಂತಿಯುತವಾಗಿ ವರ್ಷಾಚಣೆ ಮಾಡಲಾಗಿದೆ’ ಎಂದು ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>