ತಾಲ್ಲೂಕು ಕೇಂದ್ರದಿಂದ 16 ಕಿಲೋ ಮೀಟರ್ ದೂರದಲ್ಲಿರುವ ಗಾಂಧಿನಗರವು ಸಂಪದ್ಭರಿತ ಗ್ರಾಮ. ಇದರಿಂದ 100 ಮೀಟರ್ ಅಂತರದಲ್ಲಿರುವ ಜಂಬನಾಥನಹಳ್ಳಿಯ ಕೆರೆ ಪಕ್ಕದಲ್ಲಿ ಹಲವು ತಿಂಗಳುಗಳಿಂದ ಇಸ್ಪೀಟ್ ಜೂಜಾಟ ನಡೆಯುತ್ತಿದೆ. ರಾಯಚೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಿಂದ ನೂರಾರು ಜನರು ಜೂಜಾಟ ಆಡುವುದಕ್ಕಾಗಿಯೇ ಬರುತ್ತಿದ್ದಾರೆ. ಪ್ರತಿನಿತ್ಯ ಕೋಟಿಗಟ್ಟಲೆ ಹಣವು ವಿನಿಮಯ ಆಗುತ್ತಿದೆ.