ಜೂನ್ನಿಂದ ಮುಂಗಾರು ಆರಂಭವಾಗುತ್ತಿದ್ದು, ಬಿತ್ತನೆಗಾಗಿ ಭೂಮಿ ಹದ ಮಾಡಿಕೊಳ್ಳಬೇಕಿದೆ. ಆದರೆ, ಭತ್ತ, ಮೆಣಸಿನಕಾಯಿ ಮಾರಾಟವಾಗದೆ ಕೃಷಿ ಚಟುವಟಿಕೆಗಳನ್ನು ನಡೆಸುವುದಕ್ಕೆ ಆಗುವುದಿಲ್ಲ ಎಂದು ರೈತರು ಅಸಹಾಯಕಯಿಂದ ಕುಳಿತಿದ್ದಾರೆ. ಬೀಜ, ಗೊಬ್ಬರ ಹಾಗೂ ಬೆಳೆ ನಿರ್ವಹಣೆಗಾಗಿ ಪಡೆದಿರುವ ಸಾಲ ಮರಳಿಸುವ ಒತ್ತಡ ಒಂದು ಕಡೆಯಾದರೆ, ಮತ್ತೆ ಬೀಜ, ಗೊಬ್ಬರ ಖರೀದಿಸಲು ಹಣ ಹೊಂದಿಸಬೇಕಿದೆ.