<p><strong>ಮಾನ್ವಿ:</strong> ಪಟ್ಟಣದ ಬಸವ ವೃತ್ತದ ಹತ್ತಿರ ಇರುವ ದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪೇಂಟ್ಸ್ ಅಂಗಡಿಗೆ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ.</p><p>ಲಕ್ಷಾಂತರ ಮೌಲ್ಯದ ವಿವಿಧ ಕಂಪನಿಗಳ ಪೇಂಟ್ಸ್ ಸೇರಿದಂತೆ ಅಂಗಡಿಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.</p><p>ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು ಎಂದು ಅಂಗಡಿ ಮಾಲೀಕ ಬಿಚ್ಚಾಲಿ ವೀರೇಶ ಬಾಬು ತಿಳಿಸಿದ್ದಾರೆ.</p>
<p><strong>ಮಾನ್ವಿ:</strong> ಪಟ್ಟಣದ ಬಸವ ವೃತ್ತದ ಹತ್ತಿರ ಇರುವ ದ ಶ್ರೀ ಲಕ್ಷ್ಮೀ ವೆಂಕಟೇಶ್ವರ ಪೇಂಟ್ಸ್ ಅಂಗಡಿಗೆ ಶುಕ್ರವಾರ ಬೆಳಗಿನ ಜಾವ ಆಕಸ್ಮಿಕವಾಗಿ ಅಗ್ನಿ ಅನಾಹುತ ಸಂಭವಿಸಿದೆ.</p><p>ಲಕ್ಷಾಂತರ ಮೌಲ್ಯದ ವಿವಿಧ ಕಂಪನಿಗಳ ಪೇಂಟ್ಸ್ ಸೇರಿದಂತೆ ಅಂಗಡಿಯಲ್ಲಿನ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.</p><p>ಅಗ್ನಿಶಾಮಕ ಠಾಣೆಯ ಸಿಬ್ಬಂದಿಗಳು ಕೂಡಲೇ ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು ಎಂದು ಅಂಗಡಿ ಮಾಲೀಕ ಬಿಚ್ಚಾಲಿ ವೀರೇಶ ಬಾಬು ತಿಳಿಸಿದ್ದಾರೆ.</p>