ನವೋದಯ ವೆಂಕಟೇಶ್ವರ ದೇವಸ್ಥಾನ, ಆಶಾಪುರ ರಸ್ತೆಯ ರಾಜಮಾತ ದೇವಸ್ಥಾನ, ಉಪ್ಪಾರವಾಡಿ ವೆಂಕಟೇಶ್ವರ ದೇವಸ್ಥಾನ, ಏಗನೂರು ಟೆಂಪಲ್ ಹಾಗೂ ವಾಸವಿನಗರ ಬದರಿ ನಾರಾಯಣ ದೇವಸ್ಥಾನ ಸೇರಿದಂತೆ ವಿವಿಧ ದೇವಸ್ಥಾನಗಳಲ್ಲಿ ಬೆಳಿಗ್ಗೆಯಿಂದಲೇ ವಿಶೇಷ ಪೂಜೆ ಕೈಗೊಳ್ಳಲಾಯಿತು. ಜೊತೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು.