ರಾಯಚೂರು: ಗ್ರಾಮೀಣ ಠಾಣೆಯ ಪೊಲೀಸರು ಸಂಚರಿಸುತ್ತಿದ್ದ ಜೀಪ್ ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ಇಳಿಜಾರಿನಲ್ಲಿ ಮುಳ್ಳಿನ ಪೊದೆಗೆ ನುಗ್ಗಿದ ಘಟನೆ ತಾಲ್ಲೂಕಿನ ಮುರಾನಪುರ ಗ್ರಾಮದ ಬಳಿ ಗುರುವಾರ ನಡೆದಿದೆ.
ಅದೃಷ್ಟವಶಾತ್ ಗ್ರಾಮೀಣ ಠಾಣೆಯ ಸಿಪಿಐ ಹನುಮರೆಡ್ಡಿ ಸೇರಿ ಕಾನ್ಸ್ಟೇಬಲ್ಗಳು ಅಪಾಯದಿಂದ ಪಾರಾಗಿದ್ದಾರೆ.
ವಾಹನವು ಜಖಂಗೊಂಡಿದ್ದು, ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ತಿಳಿಸಲಾಗಿದೆ.