ಬಳ್ಳಾರಿ ಜಿಲ್ಲೆಯ ಹಗರಿ, ಬೀದರ್ ಜಿಲ್ಲೆಯ ಔರಾದ್, ಕೊಪ್ಪಳ ಜಿಲ್ಲೆಯ ಗಂಗಾವತಿ ಹಾಗೂ ರಾಯಚೂರಿನ ದೇವದುರ್ಗದಲ್ಲಿ ಹೊಸ ಕೃಷಿ ಪದವಿ ಕಾಲೇಜುಗಳನ್ನು ಪ್ರಾರಂಭಿಸುವ ಬಗ್ಗೆಯೂ ವಿಶ್ವವಿದ್ಯಾಲಯವು ಸರ್ಕಾರದ ಅನುಮತಿ ಕೋರಿದೆ. ಕೃಷಿಗೆ ಸಂಬಂಧಿಸಿದ ಶಿಕ್ಷಣ, ಸಂಶೋಧನೆ ಹಾಗೂ ವಿಸ್ತರಣಾ ಕಾರ್ಯಗಳನ್ನು ವ್ಯಾಪಿಸುತ್ತಿದೆ. ಚಿಂಚೋಳಿಯಲ್ಲಿ ಅರಣ್ಯ ಮಹಾವಿದ್ಯಾಲಯ ಪ್ರಾರಂಭಿಸಿದರೆ, ಅರಣ್ಯ ಅವಲಂಬಿಸಿ ಜೀವನ ನಡೆಸುವವರಿಗೂ ಇದರಿಂದ ಸಹಾಯವಾಗಲಿದೆ ಎಂಬುದು ವಿಶ್ವವಿದ್ಯಾಲಯದ ಅಧಿಕಾರಿಗಳ ವಿವರಣೆ.