ರಾಯಚೂರು: ನಗರದ ಎನ್ಐಜಿ ಕಾಲೋನಿಯ ಕಾಶಿ ವಿಶ್ವನಾಥೇಶ್ವರ ದೇವಸ್ಥಾನದಲ್ಲಿ ಮಕ್ಕಳು ಮಹಾಶಿವರಾತ್ರಿ ದಿನದಂದು ಮಂಗಳವಾರ ದೇವರನ್ನು ಪ್ರಾರ್ಥಿಸಿ, ರಷ್ಯಾ ಹಾಗೂ ಉಕ್ರೇನ್ ದೇಶಗಳು ಯುದ್ಧ ನಿಂತುಹೋಗಲಿ ಎಂದು ಕೋರಿದರು.
ರಷ್ಯಾ ಅಧ್ಯಕ್ಷರಿಗೆ ಶಿವನು ಒಳ್ಳೆಯ ಬುದ್ದಿ ಕೊಡಲಿ. ಈ ಮೂಲಕ ಜಗತ್ತಿನಲ್ಲಿ ಶಾಂತಿ ನೆಲಸುವಂತಾಗಲಿ ಎಂದು ಘೋಷಣಾ ಫಲಕಗಳನ್ನು ಹಿಡಿದು ಗಮನ ಸೆಳೆದರು.
ಶಿವರಾತ್ರಿ ನಿಮಿತ್ತ ದೇವಸ್ಥಾನದಲ್ಲಿ ಮಹಾರುದ್ರ ಅಭಿಷೇಕ, ಗಂಧ ಲೇಪನ ಹಾಗೂ ಮಹಾ ಮಂಗಳಾರತಿ ನೆರವೇರಿಸಲಾಯಿತು.
ಮುಂದಿನ ದಿನಗಳಲ್ಲಿ ಯಾವ ರಾಷ್ಟ್ರಗಳು ಯುದ್ದ ಮಾಡದಂತೆ ಎಲ್ಲರಿಗೂ ಒಳ್ಳೆಯ ಬುದ್ದಿ ನೀಡಲಿ ಎಂದೂ ಮಕ್ಕಳು ಪ್ರಾರ್ಥಿಸಿದ್ದಾರೆ.