ಕಳೆದ ವರ್ಷ ಮುಂಗಾರು ಹಾಗೂ ಹಿಂಗಾರು ಎರಡೂ ಕೈಕೊಟ್ಟ ಕಾರಣ ರೈತರು ಹಿಂಗಾರು ಬೆಳೆ ಬಿತ್ತನೆ ಮಾಡದೇ ಕೃಷಿ ಜಮೀನುಗಳನ್ನು ಪಾಳು ಬಿಟ್ಟು ಬೆಂಗಳೂರು ಹಾಗೂ ಪುಣೆ ನಗರಗಳಿಗೆ ಗುಳೆ ಹೋಗಿದ್ದರು. ಈಚೆಗೆ ನಡೆದ ಪಟ್ಟಣದ ರಂಗನಾಥ ಸ್ವಾಮಿ ಜಾತ್ರೆಗೆ ಬಂದಿದ್ದರು. ಜಾತ್ರೆ ಮುಗಿದ ಕಾರಣ ಶನಿವಾರ ಜಾಲಹಳ್ಳಿ ಬಸ್ ನಿಲ್ದಾಣದಲ್ಲಿ ಗುಳೆ ಹೊರಡಲು ಅನೇಕ ಜನ ಸೇರಿದ್ದು ಕಂಡುಬಂತು.