'ಬೆಂಗಳೂರಿನ ಅಮಿರ್ ಎ ಶರಿಯಾ ನೀಡಿರುವ ಕರೆಗೆ ಜಿಲ್ಲೆಯ ಎಲ್ಲ ಮುಸ್ಲಿಂ ವ್ಯಾಪಾರಿಗಳು ಬೆಂಬಲಿಸಿ ಮಾರ್ಚ್ 17 ರಂದು ವ್ಯಾಪಾರ ಬಂದ್ ಮಾಡಿಕೊಂಡು ಮನೆಯಲ್ಲೇ ಉಳಿದು ಆದೇಶದ ವಿರುದ್ಧ ಶೋಕ ವ್ಯಕ್ತಪಡಿಸಬೇಕು. ಹಿಜಾಬ್ ನಿರ್ಬಂಧನೆಯು ಷರಿಯತ್ ಗೆ ವಿರುದ್ಧವಾಗಿದೆ. ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋಗಿದ್ದು, ಅಲ್ಲಿಯಾದರೂ ನಮ್ಮ ಹಕ್ಕು ರಕ್ಷಣೆ ಆಗುತ್ತದೆ ಎನ್ನುವ ವಿಶ್ವಾಸವಿದೆ. ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಕೂಡಾ 17 ರಂದು ತರಗತಿಗೆ ಹೋಗದೆ ಮನೆಯಲ್ಲೇ ಉಳಿದು ಹಕ್ಕು ರಕ್ಷಿಸುವಂತೆ ಪ್ರಾರ್ಥನೆ ಮಾಡಬೇಕು. ಯಾವುದೇ ಮನವಿ ಸಲ್ಲಿಸುವುದು, ಹೋರಾಟ, ಮೆರವಣಿಗೆ ಮಾಡುವುದು ಬೇಡ' ಎಂದು ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.