ಆರ್ಟಿಒ ಕ್ರಾಸ್, ನಿಜಲಿಂಗಪ್ಪ ಕಾಲೋನಿ, ರಾಂಪುರ ರಸ್ತೆ, ಎಲ್ಬಿಎಸ್ ನಗರ, ಕೈಲಾಸ ನಗರ, ಎಪಿಎಂಸಿ ಮುಖ್ಯದ್ವಾರ, ಗದ್ವಾಲ್ ರಸ್ತೆ, ಮುನ್ನೂರವಾಡಿ, ವಾಸವಿನಗರ, ಗಂಗಾನಿವಾಸ, ಮಡ್ಡಿಪೇಟೆ, ಜ್ಯೋತಿ ಕಾಲೋನಿ, ಐಬಿ ಕಾಲೋನಿಯಲ್ಲಿನ ಮಾರ್ಗಗಳು ಜಲಾವೃತವಾಗಿದ್ದು, ಸಂಚಾರ ವ್ಯತ್ಯಯವಾಗಿದೆ. ಕೆಲವು ಕಡೆ ಮಳೆನೀರು ಹರಿದು ಹೋಗುವ ಮಾರ್ಗಗಳಿಲ್ಲ. ಮಳೆನೀರಿನಿಂದ ಮುರುಂ ಕಿತ್ತುಹೋಗಿದೆ.