ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂತ್ರಾಲಯಕ್ಕೆ ನುಗ್ಗಿದ ಎಮ್ಮಿಗನೂರು ಹಳ್ಳದ ನೀರು: ಭಕ್ತರ ಪರದಾಟ

Last Updated 27 ಜೂನ್ 2021, 11:54 IST
ಅಕ್ಷರ ಗಾತ್ರ

ರಾಯಚೂರು: ಶನಿವಾರ ರಾತ್ರಿಯಿಡೀ ಸುರಿದ ಭಾರಿ ಮಳೆಯಿಂದ ಆಂಧ್ರಪ್ರದೇಶದಎಮ್ಮಿಗನೂರು ಹಳ್ಳ ಹರಿದು, ಮಂತ್ರಾಲಯಕ್ಕೆನೀರು ನುಗ್ಗಿದೆ.

ಸುಮಾರು ಐದು‌ ಅಡಿವರೆಗೂ ನೀರು ಹರಿಯುತ್ತಿದ್ದು, ಕೆಲವು ಮಾರ್ಗಗಳಲ್ಲಿ ಸಂಚಾರ ಸ್ಥಗಿತವಾಗಿದೆ. ಬಸ್ ನಿಲ್ದಾಣ ಹಾಗೂ ರಾಘವೇಂದ್ರ ವೃತ್ತ ಜಲಾವೃತ್ತವಾಗಿವೆ.

ಕಲ್ಯಾಣ ಮಂಟಪ ಹಾಗೂ ಮಳಿಗೆಗಳಲ್ಲಿ ನೂರು ತುಂಬಿಕೊಂಡಿದೆ. ಬೇರೆಬೇರೆ ಊರುಗಳಿಂದ ದರ್ಶನಕ್ಕಾಗಿ ಬಂದಿದ್ದ ಭಕ್ತರು ಪರದಾಡುವಂತಾಗಿದೆ.

ವಾಹನಗಳು ಜಲಾವೃತ್ತವಾಗಿವೆ. ಮಳೆ ಈಗಲೂ ಮುಂದುವರಿದಿದೆ. ರಾಯರ ಮಠದತ್ತ ನೀರು ತಲುಪಿಲ್ಲ. ಆದರೆ, ಆವರಣದ ಮುಖ್ಯದ್ವಾರದ ಬಳಿ ನೀರು ಹರಿದು ತುಂಗಭದ್ರಾ ನದಿಗೆ ಸೇರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT