<p>ಕವಿತಾಳ: ಮೂರು ತಿಂಗಳಿಂದ ಪಡಿತರ ವಿತರಣೆ ಮಾಡಿಲ್ಲ ಎಂದು ಆರೋಪಿಸಿದ ಮಸ್ಕಿ ತಾಲ್ಲೂಕಿನ ಗೂಗೆಬಾಳ ಗ್ರಾಮಸ್ಥರು ಬಸಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಗುರುವಾರ ಗ್ರಾಮಕ್ಕೆ ಬಂದು ಹೆಬ್ಬೆಟ್ಟಿನ ಗುರುತು ಪಡೆದು ಹೋಗಿದ್ದಾರೆ. ಈಗ ಪಡಿತರ ವಿತರಣೆಗೆ ನಿರಾಕರಿಸುತ್ತಿದ್ದಾರೆ. ಮೂರು ತಿಂಗಳಿಂದ ಇದೇ ರೀತಿ ಮಾಡುತ್ತಿದ್ದು ಉಪವಾಸ ಬೀಳುವಂತಾಗಿದೆʼ ಎಂದು ಮಹಿಳೆಯರು ಅಂಗಡಿ ಮಾಲೀಕನ ಜತೆ ವಾಗ್ವಾದ ಮಾಡಿದರು.</p>.<p>ʼಮಕ್ಕಳು ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ಮನೆಯಲ್ಲಿ ವಯಸ್ಸಾದ ಅತ್ತೆ, ಮಾವ ಇದ್ದಾರೆ. ಮೂರು ತಿಂಗಳಿಂದ ಅಕ್ಕಿ ಕೊಡದಿದ್ದರೆ ಜೀವನ ನಡೆಸುವುದು ಹೇಗೆʼ ಎಂದು ದೇವಮ್ಮ ಅಳಲು ತೋಡಿಕೊಂಡರು.</p>.<p>ʼಗ್ರಾಮದಲ್ಲಿ ಅಂದಾಜು 110 ಕುಟುಂಬಗಳಿದ್ದು 5 ಕೆ.ಜಿ. ಬದಲಿಗೆ 4 ಕೆ.ಜಿ. ಅಕ್ಕಿ ನೀಡುತ್ತಾರೆ, ಈಗ ಮೂರು ತಿಂಗಳಿಂದ ಪಡಿತರ ವಿತರಿಸಿಲ್ಲ. ಈ ಬಗ್ಗೆ ಕೇಳಿದರೆ ಮುಂದಿನ ತಿಂಗಳು ನೀಡುವುದಾಗಿ ಹೇಳಿ ಪ್ರತಿ ತಿಂಗಳು ಅದನ್ನೇ ಹೇಳುತ್ತಾರೆʼ ಎಂದು ತಿಪ್ಪಣ್ಣ, ಕರಿಯಪ್ಪ ಮತ್ತು ಆದಪ್ಪ ಅಸಮಧಾನ ವ್ಯಕ್ತಪಡಿಸಿದರು.</p>.<p>‘ಸದ್ಯ ಪಡಿತರ ಕಡಿಮೆ ಬಿಡುಗಡೆಯಾಗಿದ್ದು ಇನ್ನೂ ಹೆಚ್ಚಿನ ಪಡಿತರ ಬಿಡುಗಡೆ ಅಧಿಕಾರಿಗಳ ಲಾಗಿನ್ ಹಂತದಲ್ಲಿದೆ. ಹೀಗಾಗಿ ಗೊಂದಲವಾಗಿದೆ. ಈ ತಿಂಗಳು ಬಸಾಪುರ ಗ್ರಾಮದವರಿಗೆ ವಿತರಿಸಿ ಜನವರಿ ತಿಂಗಳಲ್ಲಿ ಒಟ್ಟು ನಾಲ್ಕು ತಿಂಗಳ ಪಡಿತರವನ್ನು ಗೂಗೆಬಾಳ ಗ್ರಾಮಕ್ಕೆ ವಿತರಿಸುವುದಾಗಿʼ ಅಂಗಡಿ ಮಾಲೀಕ ಅಯ್ಯಣ್ಣ ಹೊಸಮನಿ ಹೇಳಿದರು.</p>.<p>’ಕಾರ್ಡ್ಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ತಿಂಗಳು ನಿಗದಿತ ಪಡಿತರ ವಿತರಣೆ ಮಾಡಲಾಗಿದೆ. ಅಧಿಕಾರಿಗಳ ಹಂತದಲ್ಲಿ ಬಿಡುಗಡೆಗೆ ಬಾಕಿ ಉಳಿದಿಲ್ಲ. ಈ ಬಗ್ಗೆ ಅಂಗಡಿ ಮಾಲೀಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ ಇಲಾಖೆ ಶಿರಸ್ತೇದಾರ ವಿರುಪಣ್ಣ ತಿಳಿಸಿದರು.</p>.<p>ದುರುಗಮ್ಮ, ಮಲ್ಲಮ್ಮ, ಲಕ್ಷ್ಮೀ, ಬಸ್ಸಮ್ಮ, ಗಂಗಮ್ಮ, ತಿಪ್ಪಣ್ಣ, ಯಂಕಮ್ಮ, ಕೃಷ್ಣಮ್ಮ, ಮರಿಸ್ವಾಮಿ, ದೇವರಾಜ, ಗೌರಮ್ಮ, ಹುಸೇನಪ್ಪ, ನಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಕವಿತಾಳ: ಮೂರು ತಿಂಗಳಿಂದ ಪಡಿತರ ವಿತರಣೆ ಮಾಡಿಲ್ಲ ಎಂದು ಆರೋಪಿಸಿದ ಮಸ್ಕಿ ತಾಲ್ಲೂಕಿನ ಗೂಗೆಬಾಳ ಗ್ರಾಮಸ್ಥರು ಬಸಾಪುರ ಗ್ರಾಮದ ನ್ಯಾಯಬೆಲೆ ಅಂಗಡಿ ಎದುರು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದರು.</p>.<p>‘ಗುರುವಾರ ಗ್ರಾಮಕ್ಕೆ ಬಂದು ಹೆಬ್ಬೆಟ್ಟಿನ ಗುರುತು ಪಡೆದು ಹೋಗಿದ್ದಾರೆ. ಈಗ ಪಡಿತರ ವಿತರಣೆಗೆ ನಿರಾಕರಿಸುತ್ತಿದ್ದಾರೆ. ಮೂರು ತಿಂಗಳಿಂದ ಇದೇ ರೀತಿ ಮಾಡುತ್ತಿದ್ದು ಉಪವಾಸ ಬೀಳುವಂತಾಗಿದೆʼ ಎಂದು ಮಹಿಳೆಯರು ಅಂಗಡಿ ಮಾಲೀಕನ ಜತೆ ವಾಗ್ವಾದ ಮಾಡಿದರು.</p>.<p>ʼಮಕ್ಕಳು ದುಡಿಯಲು ಬೆಂಗಳೂರಿಗೆ ಹೋಗಿದ್ದಾರೆ. ಮನೆಯಲ್ಲಿ ವಯಸ್ಸಾದ ಅತ್ತೆ, ಮಾವ ಇದ್ದಾರೆ. ಮೂರು ತಿಂಗಳಿಂದ ಅಕ್ಕಿ ಕೊಡದಿದ್ದರೆ ಜೀವನ ನಡೆಸುವುದು ಹೇಗೆʼ ಎಂದು ದೇವಮ್ಮ ಅಳಲು ತೋಡಿಕೊಂಡರು.</p>.<p>ʼಗ್ರಾಮದಲ್ಲಿ ಅಂದಾಜು 110 ಕುಟುಂಬಗಳಿದ್ದು 5 ಕೆ.ಜಿ. ಬದಲಿಗೆ 4 ಕೆ.ಜಿ. ಅಕ್ಕಿ ನೀಡುತ್ತಾರೆ, ಈಗ ಮೂರು ತಿಂಗಳಿಂದ ಪಡಿತರ ವಿತರಿಸಿಲ್ಲ. ಈ ಬಗ್ಗೆ ಕೇಳಿದರೆ ಮುಂದಿನ ತಿಂಗಳು ನೀಡುವುದಾಗಿ ಹೇಳಿ ಪ್ರತಿ ತಿಂಗಳು ಅದನ್ನೇ ಹೇಳುತ್ತಾರೆʼ ಎಂದು ತಿಪ್ಪಣ್ಣ, ಕರಿಯಪ್ಪ ಮತ್ತು ಆದಪ್ಪ ಅಸಮಧಾನ ವ್ಯಕ್ತಪಡಿಸಿದರು.</p>.<p>‘ಸದ್ಯ ಪಡಿತರ ಕಡಿಮೆ ಬಿಡುಗಡೆಯಾಗಿದ್ದು ಇನ್ನೂ ಹೆಚ್ಚಿನ ಪಡಿತರ ಬಿಡುಗಡೆ ಅಧಿಕಾರಿಗಳ ಲಾಗಿನ್ ಹಂತದಲ್ಲಿದೆ. ಹೀಗಾಗಿ ಗೊಂದಲವಾಗಿದೆ. ಈ ತಿಂಗಳು ಬಸಾಪುರ ಗ್ರಾಮದವರಿಗೆ ವಿತರಿಸಿ ಜನವರಿ ತಿಂಗಳಲ್ಲಿ ಒಟ್ಟು ನಾಲ್ಕು ತಿಂಗಳ ಪಡಿತರವನ್ನು ಗೂಗೆಬಾಳ ಗ್ರಾಮಕ್ಕೆ ವಿತರಿಸುವುದಾಗಿʼ ಅಂಗಡಿ ಮಾಲೀಕ ಅಯ್ಯಣ್ಣ ಹೊಸಮನಿ ಹೇಳಿದರು.</p>.<p>’ಕಾರ್ಡ್ಗಳ ಸಂಖ್ಯೆಗೆ ಅನುಗುಣವಾಗಿ ಪ್ರತಿ ತಿಂಗಳು ನಿಗದಿತ ಪಡಿತರ ವಿತರಣೆ ಮಾಡಲಾಗಿದೆ. ಅಧಿಕಾರಿಗಳ ಹಂತದಲ್ಲಿ ಬಿಡುಗಡೆಗೆ ಬಾಕಿ ಉಳಿದಿಲ್ಲ. ಈ ಬಗ್ಗೆ ಅಂಗಡಿ ಮಾಲೀಕರೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು’ ಎಂದು ಆಹಾರ ಇಲಾಖೆ ಶಿರಸ್ತೇದಾರ ವಿರುಪಣ್ಣ ತಿಳಿಸಿದರು.</p>.<p>ದುರುಗಮ್ಮ, ಮಲ್ಲಮ್ಮ, ಲಕ್ಷ್ಮೀ, ಬಸ್ಸಮ್ಮ, ಗಂಗಮ್ಮ, ತಿಪ್ಪಣ್ಣ, ಯಂಕಮ್ಮ, ಕೃಷ್ಣಮ್ಮ, ಮರಿಸ್ವಾಮಿ, ದೇವರಾಜ, ಗೌರಮ್ಮ, ಹುಸೇನಪ್ಪ, ನಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>