ಸಂಜೆ ದೇವಸ್ಥಾನದ ನೂತನ ರಥವನ್ನು ಹೂವಿನಿಂದ ಅಲಂಕಾರ ಮಾಡಲಾಗಿತ್ತು. ರಥಕ್ಕೆ ವಿವಿಧ ಧಾರ್ಮಿಕ ಪೂಜೆಗಳನ್ನು ಸಲ್ಲಿಸಲಾಯಿತು. ಪಲ್ಲಕ್ಕಿಯಲ್ಲಿ ಮೆರವಣಿಗೆ ಮೂಲಕ ತರಲಾಗಿದ್ದ ಬಂಧುಪುರೇಶನ ಉತ್ಸವ ಮೂರ್ತಿಯನ್ನು ನೂತನ ರಥದ ಮೇಲೆ ಪ್ರತಿಷ್ಠಾಪಿಸುತ್ತಿದ್ದಂತೆ ನೆರೆದ ಭಕ್ತರ ಜಯಘೋಷಗಳು ಹಾಕಿದರು.
ಶಾಸಕ ಆರ್. ಬಸನಗೌಡ, ತಹಶೀಲ್ದಾರ್ ಆರ್. ಕವಿತಾ, ದೇವಸ್ಥಾನದ ಜೀರ್ಣೋದ್ದಾರ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಸ್ವಾಮಿ ರಥೋತ್ಸವಕ್ಕೆ ಚಾಲನೆ ನೀಡಿದರು.