ರಾಯಚೂರು: ವಚನಗಳ ಪಿತಾಮಹ ಫ.ಗು. ಹಳಕಟ್ಟಿ, ಹಾರ್ಡೆಕರ್ ಮಂಜಪ್ಪನವರೊಂದಿಗೆ ಬಸವ ತತ್ವ ಪ್ರಚಾರಕ್ಕಾಗಿ ಜೀವನವನ್ನೇ ಮುಡುಪಾಗಿಟ್ಟ ಮಹಾನ್ ಸಂತ ಎಂದು ಶರಣ ಪರಮೇಶ್ವರ ಸಾಲಿಮಠ ಹೇಳಿದರು.
ನಗರದ ಬಸವ ಕೇಂದ್ರದಲ್ಲಿ ಈಚೆಗೆ ಜ್ಞಾನದಾಸೋಹಿ ಶ್ರೀಸಂಗನಬಸವ ಶಿವಯೋಗಿಗಳ 50ನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನದಾಸೋಹಿಯಾದ ಶಿವಯೋಗಿಗಳು ವಿಜಯಪುರದ ಬಿ.ಎಲ್.ಡಿ.ಈ. ಸರ್ವತೋಮುಖ ಏಳ್ಗೆಗಾಗಿ ಹಗಲಿರುಳು ಶ್ರಮಿಸಿದ್ದಾರೆ ಎಂದರು.
ಇಂದಿನ ಬಸವನ ಬಾಗೇವಾಡಿ ಬಸವನ ಗುಡಿಯನ್ನು ಜೀರ್ಣನೋದ್ಧಾರ ಮಾಡಿ, ವಿದ್ಯಾ ಕೇಂದ್ರ, ಸಹಕಾರಿ ಬ್ಯಾಂಕ್ ಸ್ಥಾಪಿಸಿದರು. ಬಸವಣ್ಣನವರ ಆಶಯದಂತೆ ಇಂಡಿ ತಾಲ್ಲೂಕಿನ ಲಚ್ಯಾಣ ಗ್ರಾಮದಲ್ಲಿ 1,96,000 ಇಷ್ಟಲಿಂಗಪೂಜೆ ಮಾಡಿಸಿದರಲ್ಲದೆ ವಿಜಯಪುರದಲ್ಲಿ 770 ಅಮರಗಣಾಧಿಶರರ ಲಿಂಗ ಸ್ಥಾಪನೆ ಮಾಡಿಸಿದ್ದಾರೆ ಎಂದು ತಿಳಿಸಿದರು.