ಯರಮರಸ ಗ್ರಾಮದ ಆದರ್ಶ ವಿದ್ಯಾಲಯ ಶಾಲೆಯನ್ನು ಸಹ ತಳಿರು ತೊರಣ, ಹೂಗಳಿಂದ ಅಲಂಕಾರ ಮಾಡಲಾಯಿತು. ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ತಾಯಣ್ಣ ಕಲಮಲ ಅವರು ಮಕ್ಕಳಿಗೆ ಹೂ ನೀಡಿ ಸ್ವಾಗತಿಸಿದರು. ಸದಸ್ಯರಾದ ಹನುಮೇಶ ದಂಡು, ಅಶೋಕ ಕಾಮತ್, ಉಮಾದೇವಿ, ಸಲಿಂ ಶರಣಬಸವ, ಮಖ್ಯಶಿಕ್ಷಕಿ ನಿರ್ಮಲಾ ಇದ್ದರು.