‘ಚಹಾ ಅಂಗಡಿಯಲ್ಲಿ ನಡೆದ ಗಲಾಟೆಯಲ್ಲಿ ಬಾಗಲಕೋಟೆ ಜಿಲ್ಲೆ ಬೀಳಗಿ ತಾಲ್ಲೂಕಿನ ಜಾನಮಟ್ಟಿ ಗ್ರಾಮದ ಶ್ರೀಶೈಲ ಎನ್ನುವವರಿಗೆ ತಲೆ ಹಾಗೂ ಎರಡೂ ಕೈಗಳಿಗೆ ರಕ್ತದ ಗಾಯಗಳಾಗಿವೆ. ತಲೆಗೆ ಮತ್ತು ಗಲ್ಲಕ್ಕೆ ಪಟ್ಟಿ ಹಾಕಿರುವುದರಿಂದ ಆತ ಮಾತನಾಡುವ ಸ್ಥಿತಿಯಲ್ಲಿಲ್ಲ. ಶ್ರೀಶೈಲ ಪೀಠದ ಜಗದ್ಗುರುಗಳು ಆಸ್ಪತ್ರೆಗೆ ಭೇಟಿ ನೀಡಿದಾಗ, ಗಾಯಾಳು ಮಲಗಿದ ಜಾಗದಿಂದಲೇ ನಮಸ್ಕಾರ ಕೂಡಾ ಮಾಡಿದ, ಆದರೆ, ಬಾಯಿ ತೆರೆಯಲಾಗಲಿಲ್ಲ. ಆತ ಪ್ರಾಣಾಪಾಯದಿಂದ ಪಾರಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಆತನ ಚಿಕಿತ್ಸೆ ವ್ಯವಸ್ಥೆ ನೋಡಿಕೊಳ್ಳುವುದಕ್ಕೆ ಮಠದಿಂದ ಇಬ್ಬರು ವ್ಯಕ್ತಿಗಳನ್ನು ಬಿಟ್ಟಿದ್ದೇವೆ‘ ಎಂದು ಹೇಳಿದರು.